ಬೆಳ್ತಂಗಡಿ : ದಕ್ಷ ಅಧಿಕಾರಿ,ಅಬಕಾರಿ ನಿರೀಕ್ಷಕರಾದ ಸೌಮ್ಯಲತಾರವರಿಗೆ ಪದೋನ್ನತಿ: ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ ವರ್ಗಾವಣೆ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ವಲಯದ ಅಬಕಾರಿ ನಿರೀಕ್ಷಕರಾಗಿದ್ದ ಸೌಮ್ಯಲತಾ ಎನ್ ಇವರಿಗೆ ಪದನ್ನೋತಿ ನೀಡಿ ನ.18 ರಂದು ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ (Dy Sp of Excise) ವರ್ಗಾವಣೆ ಮಾಡಿ ಅಬಕಾರಿ ಆಯುಕ್ತರು ತಕ್ಷಣದಿಂದ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಿ ಆದೇಶ ಮಾಡಿದ್ದಾರೆ‌.

ಶ್ರೀಮತಿ ಸೌಮ್ಯಲತಾ ಎನ್ ಇವರು ಮೂಲತ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಗಳಗುಳಿ ಶ್ರೀ ಗೋವಿಂದ ನಾಯ್ಕ ಹಾಗೂ ಸುಜಾತ ದಂಪತಿಯ ಪುತ್ರಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿವಾಸಿಯಾಗಿರುವ ಬೆಳ್ತಂಗಡಿಯ ನೋಟರಿ ವಕೀಲರಾದ ಸಂತೋಷ್ ಕುಮಾರ್ ಇವರ ಪತ್ನಿ ಯಾಗಿರುತ್ತಾರೆ.ಇವರಿಗೆ ಸಮೀಕ್ಷ ಎಸ್, ಸಂಪ್ರೀತ್ ಎಸ್ ಇಬ್ಬರು ಮಕ್ಕಳಿದ್ದಾರೆ.

Leave a Comment

error: Content is protected !!