ಶಿರ್ಲಾಲು : ಬಿಲ್ಲವ ಸಮಾಜ ಬಾಂಧವರ 10ನೇ ವರ್ಷದ ‘ಕೆಸರು ಗದ್ದೆ’ ಕ್ರೀಡಾಕೂಟ

Suddi Udaya

ಶಿರ್ಲಾಲು : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು ಕರಂಬಾರು ಯುವ ಬಿಲ್ಲವ ವೇದಿಕೆ ಮಹಿಳಾ ಬಿಲ್ಲವ ವೇದಿಕೆ ಯುವವಾಹಿನಿ ಸಂಚಲನ ಸಮಿತಿ ಇದರ ಆಶ್ರಯದಲ್ಲಿ 10 ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಆನಂದ ಪೂಜಾರಿ ಕಟ್ರಬೈಲ್ ಇವರ ಗದ್ದೆಯಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಖ್ಯಾತ ಉದ್ಯಮಿ ಕೇಶವ ಪೂಜಾರಿ ಬರಮೇಲು ಇವರು ಉದ್ಘಾಟಿಸಿ ಕ್ರೀಡಾಕೂಟಕ್ಕೆ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ಪಾಲನೆ ವಹಿಸಿದ್ದರು.


ವೇದಿಕೆಯಲ್ಲಿ ಚಿದಾನಂದ ಪೂಜಾರಿ ಎಲ್ದಕ್ಕ, ವಿಶ್ವನಾಥ ಸಾಲ್ಯಾನ್, ಜಯ ಕುಮಾರ್, ಕುಶಾಲಾ, ರಮೇಶ್, ಸ್ವರಾಜ್ ಎಸ್ ಬಂಗೇರ, ದಿಸಾಂತ್ ಮಿತ್ತಮರ್ ಉಪಸ್ಥಿತರಿದ್ದರು.


ಪ್ರತಿಕ್ಷಾ ಮತ್ತು ಶ್ರೇಯಾ ಇವರು ಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ರಂಜಿತ್ ಅಜೀರೋಲಿ ಸ್ವಾಗತಿಸಿದರು. ಜ್ಞಾನೇಶ್ ಕುಮಾರ್ ಕಟ್ಟ ಧನ್ಯವಾದವಿತ್ತರು. ಹರೀಶ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ವಿಜಯ್ ಕುಮಾರ್. ಸನತ್ ಕುಮಾರ್. ಯತೀಶ್ ಕುಮಾರ್ ಸಹಕರಿಸಿದರು.

Leave a Comment

error: Content is protected !!