ಪೆರ್ಲ -ಬೈಪಾಡಿ ಅಂಚೆ ಇಲಾಖೆಯ ನೂತನ ಶಾಖೆಯ ಮುಂಭಾಗದಲ್ಲಿ ಆಧಾರ್ ಅದಾಲತ್, ನೋಂದಣಿ, ತಿದ್ದುಪಡಿ, ಹಾಗೂ ಅಂಚೆ ಇಲಾಖೆಯ ಹೊಸ ಖಾತೆ ತೆರೆಯುವ ಕಾರ್ಯಕ್ರಮ

Suddi Udaya

ಪೆರ್ಲ -ಬೈಪಾಡಿ : ಬಂದಾರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಜಂಟಿ ಆಶ್ರಯದಲ್ಲಿ ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಅಂಚೆ ಇಲಾಖೆಯ ನೂತನ ಶಾಖೆಯು ಆರಂಭಗೊಳ್ಳಲಿರುವ ಕಟ್ಟಡದ ಮುಂಭಾಗದಲ್ಲಿ ಆಧಾರ್ ಅದಾಲತ್, ನೋಂದಣಿ ಮತ್ತು ತಿದ್ದುಪಡಿ ಮತ್ತು ಅಂಚೆ ಇಲಾಖೆಯ ಹೊಸ ಖಾತೆ ತೆರೆಯುವ ಕಾರ್ಯಕ್ರಮವನ್ನು ನ.25 ರಂದು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೋಹನ್ ಶೆಟ್ಟಿ ಸಹಾಯಕ ಅಂಚೆ ಅಧೀಕ್ಷಕರು ಕಾರ್ಕಳ, ಧನಂಜಯ ಅಂಚೆ ಮೇಲ್ವಿಚಾರಕರು ಬೆಳ್ತಂಗಡಿ ಉಪ ವಿಭಾಗ, ಶ್ರೀಮತಿ ವಿಮಲಾ ಅಂಚೆ ಮೇಲ್ವಿಚಾರಕರು ಬೆಳ್ತಂಗಡಿ, ಶ್ರೀಮತಿ ಭಾರತಿ ಕೋಡಿಯಲ್ ಗ್ರಾಮ ಪಂಚಾಯತ್ ಸದಸ್ಯರು ಬಂದಾರು, ಗೋಪಾಲಕೃಷ್ಣ ಶರ್ಮ ಕೊಯ್ಯುರು, ಮಹಾಬಲ ಗೌಡ ನಾಗಂದೋಡಿ, ರಾಮಣ್ಣಗೌಡ ಬೈಪಾಡಿ, ಉಮೇಶ್ ಗೌಡ ಅಧ್ಯಕ್ಷರು ಹಾಲು ಉತ್ಪಾದಕಾರ ಸಂಘ ಪೆರ್ಲ -ಬೈಪಾಡಿ, ನಿರ್ದೇಶಕರಾದ ಬಾಲಕೃಷ್ಣ ಗೌಡ ಪಾಪುದಡ್ಕ, ಲಕ್ಷ್ಮಿಕಾಂತಗೌಡ ಕೀಲಾರು, ದಿನೇಶ್ ಗೌಡ ಅಡ್ಡಾರು ಮತ್ತು ಊರವರು ಉಪಸ್ಥಿತರಿದ್ದರು.

Leave a Comment

error: Content is protected !!