ಕನ್ಯಾಡಿಯಲ್ಲಿ ‘ಸ್ಪೂರ್ತಿ’ ಹೊಸ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

Suddi Udaya

ನಡ : ಲಾಯಿಲ ವಲಯದ ನಡ ಕನ್ಯಾಡಿಯಲ್ಲಿ ಸ್ಪೂರ್ತಿ ಎಂಬ ನಾಮಕರಣದೊಂದಿಗೆ ಹೊಸ ಜ್ಞಾನ ವಿಕಾಸ ಕೇಂದ್ರವನ್ನು ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರು ಉದ್ಘಾಟನೆ ಮಾಡಿ ಜ್ಞಾನ ವಿಕಾಸ ಕೇಂದ್ರದ ಹಿನ್ನಲೆ ಮತ್ತು ದ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಮೂಲ್ಯ ಅಕ್ಷರ ಸಾಕ್ಷರತಾ ಕೇಂದ್ರದ ಸಮಾಲೋಚಕಿಯವರಾದ ಉಷಾ ರವರು ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಉತ್ತಮ ಮಾಹಿತಿಗಳು ದೊರೆಯುತ್ತಿದ್ದು ಕಾರ್ಯಕ್ರಮದ ಸದುಪಯೋಗವನ್ನು ಪಡೆಯುವಂತೆ ತಿಳಿಸಿದರು. ಸಮನ್ವಯಧಿಕಾರಿಯವರಾದ ಮಧುರಾವಸಂತ್ ರವರು ಕೇಂದ್ರದ ಸಭೆ ನಡೆಸುವ ರೀತಿಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಸುಶಾಂತ್, ಸೇವಾಪ್ರತಿನಿಧಿ ಪುಷ್ಪ, ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಸರಳಾ ಉಪಸ್ಥಿತರಿದ್ದರು.

Leave a Comment

error: Content is protected !!