ಗುಂಡೂರಿ ಸತ್ಯನಾರಾಯಣ ಪೂಜಾ ಭಜನಾ ಮಂದಿರದ ಅರ್ಚಕ ಸಿ‌.ಕೃಷ್ಣ ಭಟ್ ನಿಧನ

Suddi Udaya

ಗುಂಡೂರಿ:ಶ್ರೀ ಸತ್ಯನಾರಾಯಣ ಪೂಜಾ ಭಜನಾ ಮಂದಿರ ಗುಂಡೂರಿ ತುಂಬೆದಲೆಕ್ಕಿ ಇಲ್ಲಿನ ಪ್ರಧಾನ ಅರ್ಚಕರು, ಗುಂಡೂರಿ ಮಜಲಕ್ಕೆ ನಿವಾಸಿ ಸಿ. ಕೃಷ್ಣ ಭಟ್ ಅವರು ನ28 ರಂದು ಹೃದಯಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಸುಮಾರು 30 ವರ್ಷಗಳಿಂದ ಶ್ರೀ ಸತ್ಯನಾರಾಯಣ ಪೂಜಾ ಭಜನಾ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸಿ ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Comment

error: Content is protected !!