ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಬಗ್ಗೆ ಬೆಳ್ತಂಗಡಿ ವಲಯದ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಬಗ್ಗೆ ಬೆಳ್ತಂಗಡಿ ವಲಯದ ಪೂರ್ವ ಭಾವಿ ಸಭೆಯನ್ನು ಡಿ.01 ರಂದು ಶ್ರೀ ಮಂಜುನಾಥೇಶ್ವರ ಸಭಾ ಭವನ ಬೆಳ್ತಂಗಡಿ ನಡೆಸಲಾಯಿತು.

ಸಭೆಯಲ್ಲಿ ಕೇಂದ್ರಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸೀತಾರಾಮ್, ಮೇಲಂತಬೆಟ್ಟು ಶ್ರೀ ಭಗವತಿ ದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಯೋಗೀಶ್, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷರು ಪುರುಷೋತ್ತಮ್, ಭಜನಾ ಪರಿಷತ್ ವಲಯ ಅಧ್ಯಕ್ಷರು ಗಣೇಶ ಕಣ್ಣಾಜೆ, ವಲಯದ ಒಕ್ಕೂಟದ ಅಧ್ಯಕ್ಷರುಗಳು , ಭಜನಾ ಮಂಡಳಿ ಪದಾಧಿಕಾರಿಗಳು, ನವಜೀವನ ಸಮಿತಿ ಪದಾಧಿಕಾರಿಗಳು, ಜನ ಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರು ಯೋಗೀಶ್ ಮೇಲಂತಬೆಟ್ಟು , ಬಿಹೆಚ್. ರಾಜು ಬೆಳ್ತಂಗಡಿ, ಗ್ರಾಮ ಪಂಚಾಯತ್ ಸದಸ್ಯರು,ಚಂದ್ರ ರಾಜ್, ಒಕ್ಕೂಟದ ಮಾಜಿ ಅಧ್ಯಕ್ಷರುಗಳು , ವಲಯ ಮೇಲ್ವಿಚಾರಕರು ಹರೀಶ್ ಗೌಡ , ವಲಯದ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಜರಿದ್ದರು.

ಈ ಸಂದರ್ಭ ಪಾದಯಾತ್ರೆ ಕರಪತ್ರ ಬಿಡುಗಡೆ ಮಾಡಿ ಪಾದಯಾತ್ರೆ ಯಶಸ್ವಿ ಬಗ್ಗೆ ವೇದಿಕೆ ಗಣ್ಯರು ಶುಭಕೋರಿದರು.

Leave a Comment

error: Content is protected !!