ಗುರುವಾಯನಕೆರೆ ದೊಂಪದಬಲಿ ಉತ್ಸವ ಸಮಿತಿ ನೇತೃತ್ವದಲ್ಲಿ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕಮಾಧವ ಸಿದ್ದಕಟ್ಟೆಯವರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ: ದೊಂಪದಬಲಿ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಡಿ.2ರಂದು ನಡೆದ ದೊಂಪದಬಲಿದ ಶುಭ ಸಂದರ್ಭದಲ್ಲಿ ಉತ್ಸವ ಸಮಿತಿಯ ವತಿಯಿಂದ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕರಾದ
ಮಾಧವ ಸಿದ್ದಕಟ್ಟೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೊಂಪದಬಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರವೀಣ್‌ ಕುಮಾ‌ರ್ ಅಜ್ರಿ ಪಾಡ್ಯಾರುಬೀಡು, ಶ್ರೀನಿವಾಸ ಅಸ್ರಣ್ಣರು ಮೂಡುಮನೆ, ಸಮಿತಿ ಅಧ್ಯಕ್ಷ ಸೋಮಶೇಖರ ದೇವಸ್ಯ ,ಸುಕೇಶ್ ಕುಮಾರ್ ಕಡಂಬು, ರಾಜಶೇಖರ ಶೆಟ್ಟಿ ಅಳದಂಗಡಿ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ. ನಾಗೇಶ್ ಮೂಲ್ಯ , ಉಪಾಧ್ಯಕ್ಷ ವಿತೇಶ್ ಬಂಗೇರ, ಕಾರ್ಯದರ್ಶಿ ಶೋಭಿತ್ ಜೈನ್, ಕೋಶಾಧಿಕಾರಿ ನಾರಾಯಣ ಆಚಾರ್ಯ ಬರಾಯ ಹಾಗೂ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!