ಬೆಳ್ತಂಗಡಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ: ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ

Suddi Udaya

ಬೆಳ್ತಂಗಡಿ : ಕರ್ನಾಟಕ ಸರಕಾರ, ಸಾರಿಗೆ ಇಲಾಖೆ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬಂಟ್ವಾಳ, ಇದರ ಅಶ್ರಯದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಿಕ ನವೆಂಬರ್ -2023, ಈ ಕಾರ್ಯಕ್ರಮ (ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ) ಇತ್ತೀಚೆಗೆ ಬೆಳ್ತಂಗಡಿ ಎ.ಪಿ.ಎಂ.ಸಿ ವಠಾರದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಸುವೀರ್‌ರವರು ಮಾತನಾಡುತ್ತಾ ಪ್ರಪಂಚದ ಸಕಲ ಜೀವರಾಶಿಗಳಲ್ಲಿ ಅತ್ಯಂತ ಬುದ್ದಿವಂತರಾದ ಮನುಷ್ಯ ಜೀವಿ, ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸರಕಾರದ ಕಾನೂನು ಕಾಯ್ದೆಗಳನ್ನು ಪಾಲಿಸಿದ್ದಲ್ಲಿ ಖಂಡಿತವಾಗಿಯೂ ಈ ಪರಿಸರವನ್ನು ಉಳಿಸಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಬದುಕಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್ ಕೆ ಮಾತನಾಡುತ್ತಾ ಪರಿಸರ ಮಾಲಿನ್ಯವನ್ನು ತಡಗಟ್ಟಲು ಜನಸಾಮಾನ್ಯರು ಸರಕಾರದೊಂದಿಗೆ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ರಾಮಚಂದ್ರ ಸಹಾಯಕ ಟ್ರಾಫಿಕ್ ಇನ್ಸೆಕ್ಟರ್, ಪಳನಿವೇಲು ಕೆ.ಎಂ ಹೆಡ್ ಕಾನ್ಸ್ ಟೇಬಲ್ ಬೆಳ್ತಂಗಡಿ ಪೊಲೀಸ್ ಠಾಣೆ ಇವರು ಉಪಸ್ಥಿತರಿದ್ದರು.

ಸಂತೋಷ ಕುಮಾರ್ ಜೈನ್, ರಮಾನಂದ ಸಾಲಿಯಾನ್, ಶಶಿಧರ, ಉಮೇಶ್ ಸುವರ್ಣ, ನಿರಂಜನ್, ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಆಶಾಶಿವಾನಂದ ಪ್ರಾರ್ಥಿಸಿದರು, ವಿನ್ಸೆಂಟ್‌ ರವರು ಸ್ವಾಗತಿಸಿ, ರಾಮದಾಸ್ ಭಂಡಾರ್ಕರ್ ಧನ್ಯವಾದ ನೀಡಿದರು. ಸುಧಾರಮಾನಂದ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚಾಲಕ-ಮಾಲಕ ವಾಹನಗಳ ಚಾಲಕ ಮಾಲಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!