ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಆಮಂತ್ರಣ ಬಿಡುಗಡೆ: ಶಶಿಧರ ಶೆಟ್ಟಿರವರಿಂದ ರೂ.25 ಲಕ್ಷ ದೇಣಿಗೆ

Suddi Udaya

Updated on:

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರವನ್ನು ಲಾಡಿಗುತ್ತು ಜೀವಂಧರ ಜೈನ್ ಡಿ.15 ರಂದು ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ರವರು ವೈಯಕ್ತಿಕವಾಗಿ ಬ್ರಹ್ಮಕಲಶೋತ್ಸವಕ್ಕೆ ರೂ. 25 ಲಕ್ಷ ದೇಣಿಗೆಯನ್ನು ನೀಡಿದರು.

ಅರ್ಚಕರಾದ ರಾಘವೆಂದ್ರ ಭಟ್ ಮಠ, ಪ್ರವೀಣ್ ಜೈನ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ರಮೇಶ್ ಬಂಗೇರ, ಗಂಗಾಧರ್ ಭಟ್, ಸತೀಶ ಕುಮಾರ್ ಕುಡ್ಡ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಉಪಾಧ್ಯಕ್ಷರುಗಳಾದ ಶ್ರೀಕಾಂತ್ ಶೆಟ್ಟಿ ಮುಂಡಾಡಿ, ನಾರಾಯಣ ಮೂಲ್ಯ, ಕಾರ್ಯದರ್ಶಿ ಸಂತೋಷ್ ಹಲ್ಲಂದಡಿ, ಧನಲಕ್ಷ್ಮಿ, ಆನಂದ ಶೆಟ್ಟಿ ಐಸಿರಿ, ಕೋಶಾಧಿಕಾರಿ ವಸಂತ ಗೌಡ ಉಪಸ್ಥಿತರಿದ್ದರು.

ಪ್ರದಾನ ಕಾರ್ಯದರ್ಶಿ ಚಿದಾನಂದ ಇಡ್ಯಾ ಸ್ವಾಗತಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಉಪ್ಪಡ್ಕ, ಧನ್ಯವಾದವಿತ್ತರು.

Leave a Comment

error: Content is protected !!