ಬಿಜೆಪಿ ತೆಕ್ಕೆಗೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಬಿರುಸಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ -9, ಕಾಂಗ್ರೇಸ್ -3 ಗೆಲುವು

Suddi Udaya

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯು ಡಿ.17 ರಂದು ಅಳದಂಗಡಿ ಜ್ಞಾನ ಮಾರ್ಗದಲ್ಲಿ ನಡೆಯಿತು.

ಅಳದಂಗಡಿ ಸಹಕಾರಿ ಸಂಘದಲ್ಲಿ 2200 ಸದಸ್ಯರಿದ್ದು ಒಟ್ಟು 12 ಸ್ಥಾನಗಳಿಗೆ ಸ್ಪರ್ಧೆ ನಡದಿದ್ದು ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 9 ಹಾಗೂ ಕಾಂಗ್ರೇಸ್ ಬೆಂಬಲಿತಾ 3 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯಥಿಗಳಾದ ಗುರುಪ್ರಸಾದ್ ಹೆಗ್ಡೆ ಬಳಂಜ, ಜನಾರ್ಧನ್ ಕೊಡಂಗೆ,ರಾಕೇಶ್ ಹೆಗ್ಡೆ ಬಳಂಜ,ಹೇಮಂತ್ ಕಟ್ಟೆ,ಸುಂದರಿ,ಮಮತಾ ಕೊರಗಪ್ಪ,ಧರ್ಣಪ್ಪ,ವಿಶ್ವನಾಥ ಹೊಳ್ಳ ಗೆಲುವು ಸಾಧಿಸಿದ್ದಾರೆ,ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳಾದ ದೇಜಪ್ಪ ಪೂಜಾರಿ, ದಿನೇಶ್ ಪಿ.ಕೆ, ದೇವಿಪ್ರಸಾದ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಸುಭಾಶ್ಚಂದ್ರ ರೈ,ಸತೀಶ್ ದೇವಾಡಿಗ, ಸುಂದರ ಆಚಾರ್ಯ ಕುದ್ಯಾಡಿ,ಬಾಲಕೃಷ್ಣ ಪೂಜಾರಿ ಯೈಕುರಿ, ಸುರೇಶ್ ಶೆಟ್ಟಿ ನಾಲ್ಕೂರು, ವಿಕ್ಟರ್ ಕ್ರಾಸ್ತ ನಾಲ್ಕೂರು, ಸತೀಶ್ ಪೂಜಾರಿ ಅಳದಂಗಡಿ, ರತ್ನಾಕರ ನಾಯ್ಕ ನಾವರ, ರಮೇಶ್ ನಾಲ್ಕೂರು, ಮೋನಿಕಾ ನಿಲೋಫರ್ , ವಸಂತಿ ಕುದ್ಯಾಡಿ,ಲೋಕೇಶ್ ಕೆ ಕುದ್ಯಾಡಿ ಸೋಲು ಕಂಡಿದ್ದಾರೆ.

Leave a Comment

error: Content is protected !!