ತ್ಯಾಜ್ಯದಿಂದ ಸೋಮನಾಥ ನದಿಯ ನೀರು ಕಲುಷಿತ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ ಯವರಿಂದ ಸೂಕ್ತ ಕಾನೂನು ಕ್ರಮಕ್ಕೆ ಕಳಿಯ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ

Suddi Udaya

ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಕಳಿಯ ಗ್ರಾಮದ ಏರುಕಡಪು ಪವಿತ್ರವಾದ ಸೋಮನಾಥ ನದಿಗೆ ಗೃಹ ಬಳಕೆ, ಅಂಗಡಿ ತ್ಯಾಜ್ಯ ನದಿ ನೀರಿಗೆ ಎಸೆದು ನದಿಯು ದುರ್ವಾಸನೆಯಿಂದ ನೀರು ಕಲುಷಿತ ಗೊಂಡಿದೆ, ಈ ಕುರಿತು ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಿ . ಸಮಸ್ಯೆ ಬಗೆಹರಿಸುವಂತೆ ಹಾಗೂ ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿಯ ಸ್ವಚ್ಚತಾ ದೃಷ್ಠಿಯಿಂದ ಶೌಚಾಲಯದ ನಿರ್ಮಾಣಕ್ಕೆ ಅನುದಾನದ ಕುರಿತು ಮನವಿ ಪತ್ರವನ್ನು ಕಳಿಯ ಗ್ರಾಮ ಪಂಚಾಯತ್ ಗೆ ಅಧ್ಯಕ್ಷರಾದ ದಿವಾಕರ ಮೆದಿನ ಇವರ ಬಳಿ ನೀಡಲಾಯಿತು..

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ದಿನೇಶ್ ಗೌಡ ಕಲ್ಕುರ್ಣಿ ಉಪಾಧ್ಯಕ್ಷರಾದ ಯಶೋಧರ ಗೌಡ ಹಿರ್ಯ, ಕಾರ್ಯದರ್ಶಿಯಾದ ಲೋಹಿತಾಶ್ವ ಕಲ್ಕುರ್ಣಿ ಗೌರವ ಸಲಹೆಗಾರರಾದ ಆನಂದ ಗೌಡ ಕಲ್ಕುರ್ಣೀ, ಸದಸ್ಯರಾದ ಪದ್ಮನಾಭ ಗೌಡ, ಶಶಿಧರ ಹೀರ್ಯ ಉಪಸ್ಥಿತರಿದ್ದರು.

Leave a Comment

error: Content is protected !!