ಗಮಕ ಜಿಲ್ಲಾಧ್ಯಕ್ಷರಾಗಿ ಮೋಹನ ಕಲ್ಲೂರಾಯರ ನೇಮಕ

Suddi Udaya

ಬೆಳ್ತಂಗಡಿ: ಕರ್ನಾಟಕ ಗಮಕ ಕಲಾ ಪರಿಷತ್ ದ.ಕ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರೋ| ಮಧೂರು ಮೋಹನ ಕಲ್ಲೂರಾಯ ಅವರು ಮರುನೇಮಕಗೊಂಡಿದ್ದಾರೆ.
ಬೆಂಗಳೂರು, ಕೇಂದ್ರ ಕಛೇರಿಯ ಅಧ್ಯಕ್ಷ ಡಾ. ಎ. ವಿ. ಪ್ರಸನ್ನ ಅವರು ಮುಂದಿನ ಮೂರು ವರ್ಷದ ಅವಧಿಗೆ ಈ ನೇಮಕವನ್ನು ಮಾಡಿದ್ದಾರೆ.

ಮೋಹನ್ ಕಲ್ಲೂರಾಯ ಅವರು ಬೆಂಗಳೂರು, ಕುಂದಾಪುರ, ಮೂಡುಬಿದರೆ, ರಾಮಕುಂಜ ಇಲ್ಲಿನ ಪದವಿ ಮಹಾವಿದ್ಯಾಲಯಗಳಲ್ಲಿ ಒಟ್ಟು ಸುಮಾರು ನಲ್ವತ್ತು ವರ್ಷಗಳ ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅತ್ಯುತ್ತಮ ಸಂಘಟಕರಾಗಿ, ಗಮಕಿಗಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ ಅವರು ತನ್ನ ಸಾಹಿತ್ಯ ಸೇವೆ ಮುಂದುವರಿಸುತ್ತಿದ್ದಾರೆ.

Leave a Comment

error: Content is protected !!