ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ರಂಜಿತ್ ಹೆಚ್ ಡಿ ಬಳಂಜ

Suddi Udaya

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ತಾಲೂಕು ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷ , ಯುವ ಸಂಘಟಕ, ಮೈಟ್ ಕಾಲೇಜಿನ ಅಸಿಸ್ಟೆಂಟ್ ಪ್ರೋಪೇಸರ್ ರಂಜಿತ್ ಹೆಚ್ ಡಿ ಬಳಂಜ ಆಯ್ಕೆಯಾಗಿದ್ದಾರೆ

ಘಟಕದ ನಿಕಟ ಪೂರ್ವಾಧ್ಯಕ್ಷರಾಗಿ ಕಳೆದ ಬಾರಿಯ ಅಧ್ಯಕ್ಷ ಪ್ರಸ್ತುತ ವಲಯ ಉಪಾಧ್ಯಕ್ಷ ಶಂಕರ್ ರಾವ್, ಉಪಾಧ್ಯಕ್ಷರುಗಳಾಗಿ ಪ್ರೀತಮ್ ಶೆಟ್ಟಿ, ಹೇಮಾವತಿ, ಆಶಾಲತಾ ಪ್ರಶಾಂತ್, ಶೀತಲ್ ಜೈನ್, ಚಂದ್ರಹಾಸ ಬಳಂಜ, ಸುಧೀರ್ ಕೆ.ಎನ್., ಶೈಲೇಶ್, ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಅನುದೀಪ್ ಜೈನ್, ಜೊತೆ ಕಾರ್ಯದರ್ಶಿಯಾಗಿ ರಾಮಕೃಷ್ಣ ಶರ್ಮಾ, ಪ್ರಮೋದ್ ಕೆ, ಕೋಶಾಧಿಕಾರಿಯಾಗಿ ಮಮಿತಾ ಸುಧೀರ್, ಮಹಿಳಾ ಸಂಯೋಜಕಿ ಶೃತಿ ರಂಜಿತ್, ಜೂನಿಯರ್ ಜೇಸಿ ಅಧ್ಯಕ್ಷ ಸಮನ್ವಿತ್ ಕುಮಾರ್, ಜೂನಿಯರ್ ಜೇಸಿ ಸಂಯೋಜಕರಾದ ರಕ್ಷಿತಾ ಶೆಟ್ಟಿ, ಸಚಿನ್ ಸಾಲಿಯಾನ್, ಕಾರ್ಯಕ್ರಮ ನಿರ್ದೇಶಕ ಸುಧೀರ್ ಜೈನ್ ಬಳಂಜ, ಮಾಧ್ಯಮ ಪ್ರತಿನಿಧಿ ವಿನಾಯಕ ಪ್ರಸಾದ್, ದಾಮೋದರ್ ಕೆ, ಸಾಮಾಜಿಕ ಮಾಧ್ಯಮ ಗಣೇಶ್ ಶಿರ್ಲಾಲು, ಅರಿಹಂತ್ ಜೈನ್, ಸಾಂಸ್ಕೃತಿಕ ಸಂಯೋಜಕ ಜಿತೇಶ್ ಕುಮಾರ್, ದೀಕ್ಷಾ ಗಣೇಶ್, ಕ್ರೀಡಾ ಸಂಯೋಜಕ ರಕ್ಷಿತ್ ಅಂಡಿಂಜೆ, ಪಿ.ಎಲ್ ಪ್ರಜ್ವಲ್, ಬುಲೆಟಿನ್ ಸಂಪಾದಕ ಪ್ರೇಮನಾಥ್ ಶೆಟ್ಟಿ, ಬುಲೆಟಿನ್ ಉಪಸಂಪಾದಕ ಆಶ್ಲೈನ್ ಡಿಸೋಜ, ಕಾನೂನು ಸಲಹೆಗಾರ ಪ್ರಶಾಂತ್ ಎಂ., ಸ್ಪೆಷಲ್ ಪ್ರೋಜೆಕ್ಟ್ ಸಂಯೋಜಕರಾಗಿ ಸುಶೀಲ್ ಕುಮಾರ್, ಗುರುರಾಜ, ಜೇಸಿ ದೀಪಕ್ ಹೆಚ್.ಡಿ., ಎಂಪರಿಂಗ್ ನಿರ್ದೆಶಕರಾಗಿ ಸ್ಮಿತೇಶ್ ಎಸ್. ಬಾರ್ಯ, ಅವಿನಾಶ್ ಬಳಂಜ, ಮಹಿಳಾ ನಿರ್ದೇಶಕರಾಗಿ ಪವಿತ್ರ ಚಿದಾನಂದ, ಅಮೃತಾ ಎಸ್. ಕೋಟ್ಯಾನ್, ವಿಜಯ್ ನಿಡಿಗಲ್, ವಿಶಾಲ್, ಟ್ರೈನಿಂಗ್ ನಿರ್ದೇಶಕರಾಗಿ ಸುಭಾಷಿಣಿ, ಜೇಸಿ ಆಶ್ರಯ ಅಜ್ರಿ, ಇವೆಂಟ್ ನಿರ್ದೇಶಕರಾಗಿ ಅರೊಲಿನ್ ಡಿಸೋಜ, ಪ್ರೀತಿ ರತೀಶ್ ರಾವ್ ಆಯ್ಕೆಯಾಗಿದ್ದಾರೆ.

Leave a Comment

error: Content is protected !!