ನಾಳ : ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಯ್ಯಪ್ಪ ವೃತ್ತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಜ.11 ರಂದು ಮಧ್ಯಾಹ್ನ ನಡೆಯಿತು.
ಹಿರಿಯ ಗುರು ಸ್ವಾಮಿ ಜಾರಪ್ಪ ಶೆಟ್ಟಿ ನಾಳ ಮಾರ್ಗದರ್ಶನದಲ್ಲಿ ಸತೀಶ್ ಶೆಟ್ಟಿ ಗೇರುಕಟ್ಟೆ ನೇತೃತ್ವದಲ್ಲಿ 33 ಅಯ್ಯಪ್ಪ ವೃತ್ತಧಾರಿಗಳು ಇರುಮುಡಿ ಕಟ್ಟುವ ಪುಣ್ಯ ಕಾರ್ಯ ಹಾಗೂ ಮುಖ್ಯ ಗುರು ಸ್ವಾಮಿ ಮೋಹನ್ ದಾಸ್ ಉಪ್ಪಿನಂಗಡಿ ಅವರಿಂದ ದೇವರಿಗೆ ವಿಶೇಷ ಮಹಾ ಪೂಜೆ ಮತ್ತು ಅನ್ನಸಂತರ್ಪಣೆ ಜರುಗಿತು.
ನಾಳ ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿಯ ಸಹಕಾರದಿಂದ ಹಲವಾರು ವರ್ಷಗಳಿಂದ ಅಯ್ಯಪ್ಪ ವೃತ್ತಧಾರಿಗಳ ಶಬರಿಮಲೆಗೆ ಯಾತ್ರೆ ನಡೆಯುತ್ತಿದೆ.
ದೇವಸ್ಥಾನದ ಸಮಿತಿ ಪದಾಧಿಕಾರಿಗಳು, ಭಕ್ತರು ಆಗಮಿಸಿದರು.











