ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಓಡೀಲು ಇಲ್ಲಿನ ಭಜನಾ ಸಮಿತಿಯಿಂದ ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮವು ಜ.10 ರಂದು ಕ್ಷೇತ್ರದ ಸನ್ನಿಧಾನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ‌‌ ಭಜನಾ ಸಮಿತಿಯ ಅಧ್ಯಕ್ಷರು ಹಾಗೂ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ ರವರು ಭಜನಾ ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ಕಜೆಕಾರು ಸಂಘಟನಾ ಕಾರ್ಯದರ್ಶಿ ಜಾರಪ್ಪ‌ಕುಲಾಲ್, ಭಜನಾ ಮಂಡಳಿ ಅಧ್ಯಕ್ಷರಾದ ಜಯ ದೇವಾಡಿಗ ಮತ್ತು‌ ವಸಂತ ಮಡಿವಾಳ, ಮಾಜಿ ಅಧ್ಯಕ್ಷ ನಾರಾಯಣ ಮೂಲ್ಯ‌, ಕಾರ್ಯದರ್ಶಿ ನಾರಾಯಣ ಮೂಲ್ಯ ಗೋಳ್ತಮಜಲು, ಮತ್ತು ಪುಂಜಾಲಕಟ್ಟೆ ಪೋಲಿಸ್ ಅಧಿಕಾರಿ ರಾಹುಲ್ ರಾವ್, ಭಜನಾ ಸಂಪನ್ಮೂಲ ವ್ತಕ್ತಿಯಾದ ದೀಪಕ್ , ಹಾಗೂ ಭಜನಾ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

Leave a Comment

error: Content is protected !!