ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.

ಬಳಂಜ ಶಾಲಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮನೋಹರ ಬಳಂಜ ಯುವ ದಿನಾಚರಣೆಯ ಬಗ್ಗೆ ಮಾತನ್ನಾಡಿದರು. ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅವರು ಸ್ವಾಮಿ ವಿವೇಕಾನಂದರ ತತ್ವ ಸಿದ್ದಾಂತದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಲಯ XV JCI ಇಂಡಿಯಾದ ವಲಯ ಉಪಾಧ್ಯಕ್ಷರಾದ JFM ಶಂಕರ್ ರಾವ್ ಉಪಸ್ಥಿತರಿದ್ದರು.ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಘಟಕಾಧ್ಯಕ್ಷ ರಂಜಿತ್ ಹೆಚ್.ಡಿ ಬಳಂಜ ಅಧ್ಯಕ್ಷತೆ ವಹಿಸಿದ್ದರು.

ಘಟಕ ಪೂರ್ವಾಧ್ಯಕ್ಷ ವಸಂತಶೆಟ್ಟಿ ಶ್ರದ್ಧಾ ವೇದಿಕೆ ಆಹ್ವಾನ ಮಾಡಿದರು. ಜೆ.ಸಿ ಅನನ್ಯ ಜೈನ್ ಜೇಸಿವಾಣಿ ಉದ್ಘೋಷಿಸಿದರು. ಜೆ.ಸಿ.ಐ ಬೆಳ್ತಂಗಡಿ ಅಧ್ಯಕ್ಷ ರಂಜಿತ್ ಎಚ್.ಡಿ. ಸ್ವಾಗತಿಸಿದರು. ದೀಕ್ಷಾ ಗಣೇಶ್ ಮತ್ತು ಜೆಸಿ ಭರತ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

Leave a Comment

error: Content is protected !!