ಬೆಳ್ತಂಗಡಿ : ನೆರಿಯದಲ್ಲಿ ಚಿರತೆ ದಾಳಿಯಿಂದ ಕಡವೆ ಸಾವು: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ

Suddi Udaya

ಬೆಳ್ತಂಗಡಿ : ಕಳೆದ ರಾತ್ರಿ ನೆರಿಯ ಕಾಡಿನಲ್ಲಿ ಚಿರತೆ ದಾಳಿಯಿಂದ ಕುತ್ತಿಗೆಯಲ್ಲಿ ತೀವ್ರ ಗಾಯಗೊಂಡಿದ್ದ ಕಡವೆ
ರಕ್ತಸಾವ್ರದಿಂದ ಸಾವನ್ನಪ್ಪಿದ ಘಟನೆ ನೆರಿಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮಲ್ಲ ಪ್ರದೇಶದಲ್ಲಿ ಜ.17 ರಂದು ಬೆಳಗ್ಗೆ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡ ಕಡವೆಯ ಶವ ಪತ್ತೆಯಾಗಿದೆ. ರಾತ್ರಿ ನೆರಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಕಡವೆಯ ಮೇಲೆ ದಾಳಿ ನಡೆಸಿದ್ದು,. ಕುತ್ತಿಗೆಗೆ ತೀವ್ರ ಗಾಯವಾದ ಕಡವೆ ಜೀವ ಉಳಿಸಲು ತಪ್ಪಿಸಿಕೊಂಡು ಮಲ್ಲ ಪ್ರದೇಶದತ್ತ ಬಂದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಾಲಾಗಿದ್ದು. ನೆರಿಯ ಪಶು ವೈದ್ಯರಿಂದ ಸ್ಥಳದಲ್ಲಿಯೇ ಶವಪರೀಕ್ಷೆ ಮಾಡಿ ಅರಣ್ಯ ಇಲಾಖೆಯವರು ದಫನ ಮಾಡಿದರು.

Leave a Comment

error: Content is protected !!