April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಲಾಯಿಲ: ವಿಘ್ನೇಶ್ವರ ಕಲಾ ಮಂದಿರದಲ್ಲಿ ರಾಮ ನಾಮ ತಾರಕ ಮಂತ್ರ ಹಾಗೂ 1,111 ಹಣತೆಗಳ ಪ್ರಜ್ವಲನೆ ಸಹಿತ ಶ್ರೀ ರಾಮ ದೇವರಿಗೆ ಮಹಾ ಮಂಗಳಾರತಿ

ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ ಇದರ ಆಶ್ರಯದಲ್ಲಿ ಆಯೋಧ್ಯ ಪ್ರಭು ಶ್ರೀ ರಾಮಲಲ್ಲನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಲಾಯಿಲದ ವಿಘ್ನೇಶ್ವರ ಕಲಾ ಮಂದಿರದಲ್ಲಿ ರಾಮ ನಾಮ ತಾರಕ ಮಂತ್ರ ಹಾಗೂ 1,111 ಹಣತೆಗಳ ದೀಪ ಪ್ರಜ್ವಲನ ಕಾರ್ಯಕ್ರಮವನ್ನು ಲಾಯಿಲ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ|ಮೂ| ಶ್ರೀ ಶ್ರೀನಿವಾಸ್ ಭಟ್ ಇವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು..

ಬಳಿಕ ಲಾಯಿಲ ಬಲಮುರಿ ಗಣಪತಿ ಭಜನಾ ಮಂಡಳಿಯ ಎಲ್ಲಾ ಭಜಕರಿಗೆ ತನ್ನ ವೈಯುಕ್ತಿಕ ನೆಲೆಯಲ್ಲಿ ಶಾಲು ಹಾಕಿ ಗೌರವಿಸಿದರು. ರಾಮತಾರಕ ಮಂತ್ರವನ್ನು ಅರ್ಚಕರಾದ ಸ್ವಸ್ತಿಕ್ ಭಟ್ ಪುಂಜಾಲಕಟ್ಟೆ ಇವರು ಎಲ್ಲರಿಗೂ ಹೇಳಿಕೊಟ್ಟರು. ನಂತರ 1,111 ಹಣತೆಗಳ ದೀಪ ಪ್ರಜ್ವಲನೇಯ ಜೊತೆ ಶ್ರೀ ರಾಮ ದೇವರಿಗೆ ಮಹಾ ಮಂಗಳಾರತಿ ನೆರವೇರಿತು..

ಈ ಸಂದರ್ಭದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. ಸಮಿತಿಯ ಸಲಹೆಗಾರರದ ಗಿರೀಶ್ ಡೋಂಗ್ರೆಯವರು ಎಲ್ಲರಿಗೂ ಸಿಹಿಯ ವ್ಯವಸ್ಥೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ 2 ಸಮಿತಿಯ ಸದಸ್ಯರುಗಳು, ಬಲಮುರಿ ಗಣಪತಿ ಭಜನಾ ಮಂಡಳಿಯ ಸಂಚಾಲಕರುಗಳು, ಭಜಕರು ಮಹಿಳಾ ಭಜನಾ ತಂಡದವರು ಹಾಗೂ ಸ್ಥಳೀಯ ರಾಮ ಭಕ್ತರು ಭಾಗವಹಿಸಿದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅರವಿಂದ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಗಣೇಶ್ ಲಾಯಿಲ ಧನ್ಯವಾದವಿತ್ತರು.

Related posts

ನಾಳ ದೇವಸ್ಥಾನದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ

Suddi Udaya

ಜ.29-ಫೆ.2 : ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

Suddi Udaya

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya

ಶಿರ್ಲಾಲು: ಭಾಸ್ಕರ್ ಸಾಲಿಯನ್ ರವರ ಮನೆ ಹಿಂದೆ ಗುಡ್ಡ ಕುಸಿತ

Suddi Udaya

ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!