ಪುಂಜಾಲಕಟ್ಟೆ: ಪಿಲಾತಬೆಟ್ಟು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ ತುಂಗಪ್ಪ ಬಂಗೇರ ಆಯ್ಕೆ

Suddi Udaya

ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ ತುಂಗಪ್ಪ ಬಂಗೇರ, ಉಪಾಧ್ಯಕ್ಷರಾಗಿ ರವಿಶಂಕರ ಹೊಳ್ಳ ಮಣ್ಣೂರು ಅವಿರೋಧ ಆಯ್ಕೆಯಾಗಿದ್ದಾರೆ.

ಸಂಘದ ಕೇಂದ್ರ ಕಚೇರಿಯಲ್ಲಿ ಸಹಕಾರ ಸಂಘಗಳ ಅಧಿಕಾರಿ ಎನ್.ಜೆ ಗೋಪಾಲ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

ನಿರ್ದೇಶಕರಾದ ಸುಂದರ ನಾಯ್ಕ, ಚಂದ್ರಶೇಖರ ಶೆಟ್ಟಿ, ನಾರಾಯಣ ಪೂಜಾರಿ, ಲಕ್ಷ್ಮೀನಾರಾಯಣ ಹೆಗ್ಡೆ, ಶಿವಯ್ಯ ಪರವ, ಪ್ರಭಾಕರ ಪಿ.ಎಂ., ಶುಭಕರ ಶೆಟ್ಟಿ, ಸರೋಜಿನಿ ಡಿ. ಶೆಟ್ಟಿ, ಹರ್ಷಿಣಿ ಪುಪ್ಪಾನಂದ, ಶಶಿಧರ ನಾಯ್ಕ, ರಾಮಕೃಷ್ಣ ಎಸ್, ಮಾಜಿ ಅಧ್ಯಕ್ಷ ಚಂದ್ರ ಶೇಖರ ಭಟ್ ಯು.ಎಸ್ ಲೋಕೇಶ್ ಆಚಾರ್ಯ, ಶ್ರೀಧರ ಶೆಟ್ಟಿ ಭಂಡಾರದಬೆಟ್ಟು, ಟಿ. ಹರೀಂದ್ರ ಪೈ, ಕಾಂತಪ್ಪ ಕರ್ಕೇರ, ಶಂಕರ ಶೆಟ್ಟಿ ಬೆದ್ರಮಾರ್, ಶೇಖರ ಅಗಲ್ದೋಡಿ, ಹರೀಶ್ ಪ್ರಭು, ಹರಿಶ್ಚಂದ್ರ ಶೆಟ್ಟಿಗಾರ್, ರತ್ನಾಕರ ಪಿ.ಎಂ, ಸತೀಶ್ ಕರ್ಕೇರ, ಪಿಡಿಒ ಯಮನಪ್ಪ ಕೊರವರ , ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ಕೇಶವ ಕಿಣಿ ಎಚ್, ಸಂಘದ ಪ್ರಭಾರ ಸಿಇಒ ಬಬಿತಾ ಡಿ. ಭಾಗವಹಿಸಿದ್ದರು.

Leave a Comment

error: Content is protected !!