24.7 C
ಪುತ್ತೂರು, ಬೆಳ್ತಂಗಡಿ
May 18, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಲವಂತಿಗೆ: ಉಮೇಶ್ ರವರಿಗೆ ಹಲ್ಲೆ, ಬೆದರಿಕೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮಲವಂತಿಗೆ ನಿವಾಸಿ ಉಮೇಶ್‌ ರವರು ರಾತ್ರಿ ಮೋಟಾರ್ ಸೈಕಲ್ ನಲ್ಲಿ ಮನೆಗೆ ಹೋಗುವ ಸಂದರ್ಭ ಉಕ್ಕುಡ ಎಂಬಲ್ಲಿ ಗುಂಪೊಂದು ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಘಟನೆ ಜ.23 ರಂದು ನಡೆದಿದೆ.

ಮಲವಂತಿಗೆ ನಿವಾಸಿ ಉಮೇಶ್‌ (35) ಎಂಬವರ ದೂರಿನಂತೆ, ಜ. 23 ರಂದು ರಾತ್ರಿ ಉಮೇಶ್ ರವರು ಬಾಬ್ತು ಮೋಟಾರ್‌ ಸೈಕಲ್‌ ನಲ್ಲಿ ಮನೆಗೆ ಹೋಗುತ್ತಾ ಉಕ್ಕುಡ ಎಂಬಲ್ಲಿಗೆ ತಲುಪಿದಾಗ, ಆರೋಪಿಗಳಾದ ರಮೇಶ್‌ ನಾಯ್ಕ, ದಯಾನಂದ, ರವಿ,ಸುರೇಶ, ಸಂತೋಷ್‌, ಪ್ರವೀಣ್‌ ಕುಮಾರ್‌ , ಅರುಣ್‌ , ಆದಿ ಜೈನ್‌, ಅನಿಲ್‌ ಜೈನ್‌, ಸಾವಂತ್‌ ,ಸುನೀಲ್‌,ಪ್ರಕಾಶ್‌ ಕುಮಾರ್‌, ಮತ್ತು ಯೂಸುಫ್‌ ರವರು ಉಮೇಶ್ ರವರನ್ನು ತಡೆದು ನಿಲ್ಲಿಸಿ, ಆರೋಪಿಗಳ ಪೈಕಿ ರಮೇಶ್‌ ನಾಯ್ಕ ರವರ ಮನೆಯ ಅಂಗಳಕ್ಕೆ ಎಳೆದುಕೊಂಡು ಹೋಗಿದ್ದು, ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಪಡಿಸಿರುತ್ತಾರೆ.

ಆರೋಪಿಗಳ ಪೈಕಿ ರಮೇಶ್‌ ನಾಯ್ಕ , ದಯಾನಂದ, ರವಿ ಮತ್ತು ಸುರೇಶ್‌ ರವರು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ, ಮೆಣಸಿನ ಹುಡಿ ಎರಚಿದ್ದು, ಬಳಿಕ‌ ಆರೋಪಿಗಳು ಜೀವ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ. ನಂ: 06/2024 ಕಲಂ: 143,147,148,341,324,504,506, ಜೊತೆಗೆ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ : ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಚಿರತೆ ಮೃತದೇಹ ಪತ್ತೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು ಪರಿಶೀಲನೆ

Suddi Udaya

ಪದ್ಮುಂಜ: ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ ಇ -ಸ್ಟ್ಯಾಂಪ್ (ಠಸ್ಸೆ) ಪೇಪರ್ ಸೇವೆಯ ಶುಭಾರoಭ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಸಹಕಾರ ಭಾರತಿ ಸಮಿತಿ ಸಭೆ

Suddi Udaya

ಕಳೆ0ಜ :ಆನೆ ದಾಳಿ ಅಡಿಕೆ ಗಿಡ ಮತ್ತು ಬಾಳೆ ಗಿಡ ಸಂಪೂರ್ಣ ನಾಶ

Suddi Udaya

ಅ.18 ರಂದು ನಡೆಯಲಿರುವ ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೈನ್, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಮ್ ಅಹಮ್ಮದ್ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಅಲ್ಪಸಂಖ್ಯಾತರ ಸಮಾವೇಶ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಆಹ್ವಾನ

Suddi Udaya
error: Content is protected !!