September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

ಉರುವಾಲು :ಉರುವಾಲು ಗ್ರಾಮದ ಕಾರಿಂಜ ಬಾಕಿಮಾರಿನಲ್ಲಿ ವರ್ಷಂಪ್ರತಿಯಂತೆ ಗ್ರಾಮ ದೈವಗಳಿಗೆ ಹಾಗೂ ಪರಿವಾರ ನೇಮೋತ್ಸವವು ಜ.25, 26 ರಂದು ನಡೆಯಿತು.

ಜ.25ರಂದು ಪಿಲಿಚಾಮುಂಡಿ ದೈವಕ್ಕೆ ಪರ್ವಹಾಗೂ ತೋರಣ ಮುಹೂರ್ತ ಸಂಜೆ ಹೋಮ, ಸ್ಥಳ ಶುದ್ಧಿ, ಬಿಂಬ ಶುದ್ದಿ, ಕಲಶ ಶುದ್ದಿ ಚೆಂಡೆತ್ತಿಮಾರು ಗುತ್ತಿನಿಂದ ಭಂಡಾರ ಹೊರಡುವುದು, ರಾತ್ರಿ ಕಾರಿಂಜ ಬಾಕಿಮಾರಿನಲ್ಲಿ ಭಂಡಾರ- ಇಳಿಸುವುದು, ಪಿಲಿಚಾಮುಂಡಿ ಭಂಡಾರ ಇಳಿಸಿ ದೈವಗಳಿಗೆ ಪರ್ವ ಹಾಗೂ ರಾಜಂದೈವ ಕಲ್ಕುಡ, ಪಿಲಿಚಾಮುಂಡಿ ಇತರ ಪರಿವಾರ ದೈವಗಳಿಗೆ ಎಣ್ಣೆ ವೀಳ ಕೊಡುವುದು ಮತ್ತು ನೇಮ, ಪಲ್ಲಪೂಜೆ, ಅನ್ನಸಂತರ್ಪಣೆ, ಕಲ್ಕುಡ, ಕಲ್ಲುರ್ಟಿ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಜ.26ರಂದು ಸಂಜೆ ಎಣ್ಮಣ್ಣಾಯ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು- ಅಂಕ-ಚೆಂಡು, ಎಣ್ಮಣ್ಣಾಯ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ, ಪಂಜುರ್ಲಿ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು, ನೇಮ ಜರುಗಿತು.


ಜ.28ರಂದು ಬೆಳಿಗ್ಗೆ ಕುಡುಮದ ಪಂಜುರ್ಲಿ, ಕೊರಗಜ್ಜ, ಗುಳಿಗ ಹಾಗೂ ಮುಗೇರ ಕೋಲ (ಮುಗೇರರ ಬನದಲ್ಲಿ), ಸಂಜೆ ಮಹಮ್ಮಾಯಿಗೆ ಸೇವೆ ಹಾಗೂ ಮಾರಿ ಪೂಜೆ ನಡೆಯಲಿದೆ.

ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ನೇಮೋತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು. ಹಾಗೂ ಉರುವಾಲು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

Suddi Udaya

ಜಿನ ಮಂದಿರದಲ್ಲಿ ಯಜ್ಞೋಪವಿತ ತಯಾರಿಸುವ ತರಬೇತಿ

Suddi Udaya

ಸಚಿವ ದಿನೇಶ್ ಗುಂಡೂರಾವ್‌ರಿಂದ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯ ಲೋಕಾರ್ಪಣೆ

Suddi Udaya

ನಿದ್ದೆ ಮಾತ್ರೆ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಲಾವಿದ ಮುಂಡಾಜೆಯ ಜಯರಾಂ ಕೆ. ಮೃತ್ಯು

Suddi Udaya

ಸಾವ್ಯ : ಮರೆಜಾಲು ನಿವಾಸಿ ಸಂತೋಷ್ ನಿಧನ

Suddi Udaya

ಕೊಕ್ಕಡ: EduNest ಅಕಾಡೆಮಿ ಕೋಚಿಂಗ್ ಕೇಂದ್ರ ಉದ್ಘಾಟನೆ

Suddi Udaya
error: Content is protected !!