ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕಾರ್ಯಾಲಯ ಹಾಗೂ ಭಜನೋತ್ಸವ ಸಮಿತಿಯ ಸಮಾಲೋಚನಾ ಸಭೆ

Suddi Udaya

ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕಾರ್ಯಾಲಯ ಸಮಿತಿ ಹಾಗೂ ಭಜನೋತ್ಸವ ಸಮಿತಿಯ ಸಮಾಲೋಚನಾ ಸಭೆಯನ್ನುನಡೆಯಿತು.

ಸಭೆಯಲ್ಲಿ ಕಾರ್ಯಾಲಯ ಸಮಿತಿಯ ಜವಾಬ್ದಾರಿಯ ಬಗ್ಗೆ ಸಮಿತಿ ಸಂಚಾಲಕಿ ಶ್ರೀಮತಿ ವಾರಿಜ ವಿ ಶೆಟ್ಟಿ ಕೊರಿಂಜ ಮೇಲ್ವಿಚಾರಕಿ ಯವರು ಮಾಹಿತಿ ನೀಡಿದರು. ಭಜನೋತ್ಸವ ಕಾರ್ಯಕ್ರಮದ ಬಗ್ಗೆ ಸಂಚಾಲಕರಾದ ದಿನೇಶ್ ಮಲ್ಲೆಂಗಲ್ಲು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಕೋಶಾಧಿಕಾರಿ ಸುಂದರ ಎಂಜಿರಪಲ್ಕೆ, ಡಿಕಯ್ಯ ಉಪಸ್ಥಿತರಿದ್ದರು. ಸಮಿತಿ ಸಹಸಂಚಾಲಕಿ ಜಲಜಾಕ್ಷಿ ಸ್ವಾಗತಿಸಿ, ಭವಾನಿ ಆಳ್ವ ಕೊರಿಂಜ ವಂದಿಸಿದರು. ಸಭೆಯಲ್ಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!