ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸರಕಾರದಿಂದ ಸಮ್ಮತಿ

ಬೆಳ್ತಂಗಡಿ: ರಾಜ್ಯದ ಪಂಚಾಯತ್ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಣೆ ಮಾಡುತ್ತಿರುವ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ಸರಕಾರ ಒಪ್ಪಿಗೆ ನೀಡಿದೆ.


ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘ ಸಚಿವ ಶರಣಪ್ರಕಾಶ ಬಸಪ್ಪ ಪಾಟೀಲ್, ಹಿರಿಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್, ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ.


ವೇತನ ಹೆಚ್ಚಳ ಕುರಿತಂತೆ ಎಂಬಿಕೆ ಗಳು ಮತ್ತು ಎಲ್ ಸಿ ಆರ್ ಪಿ ಗಳು ಅವರ ವ್ಯಾಪ್ತಿಯಲ್ಲಿ ಬರುವ ಸ್ವಸಹಾಯ ಸಂಘಗಳ ಸಂಖ್ಯೆಯ ಆಧಾರದಲ್ಲಿ 40 ಸ್ವಸಹಾಯ ಸಂಘಗಳಿದ್ದರೆ 6 ಸಾವಿರ ರೂ 90 ಸಂಘಗಳಿದ್ದರೆ 9 ಸಾವಿರ ರೂ ಗಳಂತೆ ಕನಿಷ್ಠ 5 ಸಾವಿರ ರೂ ಗಳಿಂದ ಗರಿಷ್ಠ 9 ಸಾವಿರ ರೂ ವರೆಗೆ ವೇತನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು ಎಪ್ರಿಲ್ ನಿಂದ ವೇತನ ಏರಿಕೆ ಕ್ರಮ ಕೈಗೊಳ್ಳಲಾಗುವುದು ಈ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುವುದು ತಿಳಿಸಿದರು.


2021 ರಿಂದ 2023 ರವರೆಗೆ 6 ಬಾರಿ ಗಣತಿ ಕಾರ್ಯ ಮಾಡಿದ್ದು ಗಣತಿಯಲ್ಲಿ ಭಾಗಿಯಾದವರಿಗೆ ನೀಡಬೇಕಾದ ಬಾಕಿ ವೇತನವನ್ನು ಕೊಡಲು ಒಪ್ಪಿದರು. ಪಂಚಾಯತ್ ಗಳಲ್ಲಿ ಸಂಜೀವಿನಿ ಸಿಬ್ಬಂದಿಗೆ ವ್ಯವಸ್ಥೆ, ಪ್ರತ್ಯೇಕ ಕಚೇರಿಗೆ ಸ್ಥಳವಿದ್ದಲ್ಲಿ ನರೇಗಾ ಮೂಲಕ ಕಟ್ಟಡ, ನೌಕರರಿಗೆ ಐಡಿ ಕಾರ್ಡ್ ಮತ್ತು ನೇಮಕಾತಿ ಆದೇಶ ಪತ್ರ ಯುನಿಫಾರಂ ಹಾಗೂ ಸೇವಾ ನಿಯಮಾವಳಿಗಳಿಗೆ ಕ್ರಮ ಕೈಗೊಳ್ಳುವುದು ಎಂ ಬಿ ಕೆ ಗಳಿಗೆ ಚೆಕ್ ಸಹಿ ಮಾಡುವ ಅಧಿಕಾರ ನೀಡುವ ಅವಕಾಶವನ್ನು ಪರಿಶೀಲಿಸಿ ನಿರ್ಧಾರಿಸುವುದಾಗಿ ತಿಳಿಸಿದರು.

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭ ರಾಜ್ಯ ಯೂನಿಯನ್ ಪ್ರತಿಭಟನೆ ನಡೆಸಿತ್ತು

ಈ ವೇಳೆ ರಾಜ್ಯಾಧ್ಯಕ್ಷೆ ರುದ್ರಮ್ಮ ಶಿವಮೊಗ್ಗ ಮತ್ತು ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಎಲ್ಲಾ ಜಿಲ್ಲೆಯ ಯೂನಿಯನ್ ಪ್ರಮುಖರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ದ ಬೇರೆ ಬೇರೆ ತಾಲೂಕು ಯೂನಿಯನ್ ನ ಸದಸ್ಯರು ಬೆಳಗಾವಿಯಲ್ಲಿ ನಡೆದ ಹೋರಾಟಕ್ಕೆ ಬೆಂಬಲ ನೀಡಿದ್ದರು.

Related posts

ಮುಂಡೂರು: ದುರ್ಗಾ ನಗರ ನಿವಾಸಿ ಕಾರ್ತಿಕ್ ಹೆಗ್ಡೆ ನಿಧನ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಯಶಸ್ವಿ ವಾರ್ಷಿಕ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

Suddi Udaya

ನ್ಯಾಯತರ್ಪು : ರಕ್ತೇಶ್ವರಿ ಪದವು ಬಳಿ ಗುಡ್ಡ ಕುಸಿತ: ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷರು , ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ

Suddi Udaya

ವೇಶ್ಯಾವಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸರಿಂದ ದಾಳಿ

Suddi Udaya

ಅಭಿವೃದ್ಧಿಗೆ ಒತ್ತು ನೀಡದ, ಸಾಲದ ಹೊರೆಯನ್ನು ಹೆಚ್ಚಿಸುವ, ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ದ.ಕ ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಉಜಿರೆ ಬೂತ್ ಸಂಖ್ಯೆ 98 ರ ಮತಗಟ್ಟೆಗೆ ಭೇಟಿ

Suddi Udaya
error: Content is protected !!