September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

ಬೆಳ್ತಂಗಡಿ :ಸೀರೋ ಮಲಬಾರ್ , ಮಲಂಕರ ಸಭೆ ಸೇರಿದಂತೆ ವಿವಿದ ಧರ್ಮ ಸಭೆಯ ಚರ್ಚ್ ಗಳಲ್ಲಿ ಲೋಕ ರಕ್ಷಕ, ಮಹಾನ್ ಮಾನವತಾವಾದಿ, ಸಹನೆ, ತ್ಯಾಗ ಮತ್ತು ಪ್ರೀತಿಯ ಮೂಲಕ ಲೋಕವನ್ನು ಗೆದ್ದ ಯೇಸು ಕ್ರಿಸ್ತರ ಯಾತನೆಯನ್ನು ನೆನಪಿಸುವ ಪಾಸ್ಕ ಕಾಲಕ್ಕೆ ಕ್ರೈಸ್ತರು ವಿವಿದ ಚರ್ಚ್ ಗಳಿಗೆ ಇಂದು ಮುಂಜಾನೆ ತೆರಳಿ ಪೂಜಾರ್ಪಣೆ ಯಲ್ಲಿ ಭಾಗವಹಿಸಿ ಹಣೆಗೆ ಆಶೀರ್ವದಿಸಿದ ವಿಭೂತಿಯನ್ನು ಧರ್ಮ ಗುರುಗಳಿಂದ ಹಚ್ಚಿ ವ್ರತಾನುಷ್ಟಾನಕ್ಕೆ ಪ್ರವೇಶ ಪಡೆದರು.

ಇಂದಿನಿಂದ ಸಾಮಾನ್ಯವಾಗಿ ಕ್ರೈಸ್ತರು ಮಾಂಸ ಆಹಾರವನ್ನು ತ್ಯಜಿಸಿ ಸಂಪೂರ್ಣ ಶಾಖಾಹಾರಿಗಳಾಗಿ ಬದಲಾಗುತ್ತಾರೆ. ಪ್ರತಿ ದಿನ ಪೂಜೆಯಲ್ಲಿ ಭಾಗವಹಿಸಿ ಶಿಲುಬೆಯ ಹಾದಿಯ ಪ್ರಾರ್ಥನೆ ಯನ್ನು, ಮನೆಗಳಲ್ಲಿ ಚರ್ಚ್ ಗಳಲ್ಲಿ ಮಾಡುವುದು ಈ ಸಂದರ್ಭದ ವಿಶೇಷ, ಮಾಡಿದ ತಪ್ಪುಗಳಿಗೆ ಪರಿಹಾರ ಮತ್ತು ಪಾಪ ವಿಮುಕ್ತಿ ಪಡೆಯುವುದು ಈ ವ್ರತಾಚರಣೆಯ ದಿನಗಳ ವಿಶೇಷತೆಯಾಗಿದೆ. ಇಂದಿನಿಂದ ಈಸ್ಟರ್ ವರೆಗಿನ ಐವತ್ತು ದಿನಗಳ ವರೆಗೆ ಈ ವ್ರತಚಾರಣೆ ನಡೆಯಲಿದೆ. ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು, ಫಾ. ಆಶೀಲ್ ನೇತೃತ್ವ ವಹಿಸಿದರು.

Related posts

ಜು.16ರಿಂದ ಧರ್ಮಸ್ಥಳದಲ್ಲಿ 55ನೇ ವರ್ಷದ ಪುರಾಣ ವಾಚನ-ಪ್ರವಚನ

Suddi Udaya

ಬೆಂಗಳೂರಿನಲ್ಲಿ ಸರ್ಕಾರಿ ನೌಕರರ ಸಂಘದ ಸಮಾವೇಶ- ಬೆಳ್ತಂಗಡಿಯವರು ಭಾಗಿ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರಾ ಮಹೋತ್ಸವ

Suddi Udaya

ಕಳಿಯ: ಗೋವಿಂದೂರು ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ

Suddi Udaya

ಅಪ್ರಾಪ್ತ ಬಾಲಕಿ ನೇಣುಬಿಗಿದು ಆತ್ಮಹತ್ಯೆ

Suddi Udaya

ತೋಡಿನಂತಿರುವ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ : ಭಯಾನಕ ಗುಂಡಿಗಳಿಗೆ ತೇಪೆ ಕಾರ್ಯ

Suddi Udaya
error: Content is protected !!