ನಿವೃತ್ತ ಜಲಾನಯನ ಅಧಿಕಾರಿ ದಯಾನಂದ ಹೆಚ್. ಕುಕ್ಕೇಡಿ ನಿಧನ

Suddi Udaya

ಕುಕ್ಕೇಡಿ: ನಿವೃತ್ತ ಜಲಾನಯನ ಅಧಿಕಾರಿ, ಸರಳ ಸಜ್ಜನಿಕೆಯ ಕುಕ್ಕೇಡಿ ಪಡ್ಯೋಡಿ ಬೈಲು ನಿವಾಸಿ ದುರ್ಗಾದಯ ಕೃಪಾ ನಿವಾಸಿ ದಯಾನಂದ ಹೆಚ್ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಫೆ.19) ನಿಧನರಾದರು.

ಮೃತರು ಜಲಾನಯನ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕೊಡುಗೈ ದಾನಿಯಾಗಿ ಪ್ರಗತಿಪರ ಕೃಷಿಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

ಪತ್ನಿ ಕುಕ್ಕೇಡಿ ಗ್ರಾ.ಪಂ ಸದಸ್ಯೆ ಗುಣವತಿ ಡಿ, ಓರ್ವ ಪುತ್ರ ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್, ಇಬ್ಬರು ಪುತ್ರಿಯರಾದ ನಿಶ್ಮಿತಾ, ನಿವೇದಿತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!