ವೇಣೂರು: ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

Suddi Udaya

ವೇಣೂರು : ಸುಮಾರು 4.00 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ತ್ಯಾಗಿಭವನದ ಉದ್ಘಾಟನೆ ಪೆ .24 ರಂದು ಕ್ಷೇತ್ರದಲ್ಲಿ ಪರಮಪೂಜ್ಯ ಯುಗಳಮುನಿಶ್ರೀಗಳಿಂದ ನೆರವೇರಿತು.

ಈ ಸಂದರ್ಭ ಹೊಂಬುಜ ಮಠಾಧೀಶರಾದ ದೇವೇಂದ್ರಕೀರ್ತಿ ಭಟ್ಠಾರಕ ಸ್ವಾಮೀಜಿ, ಮೂಡಬಿದಿರೆ ಶ್ರೀ ಜೈನಮಠದ ಚಾರುಕೀರ್ತಿ ಭಟ್ಠಾರಕ ಸ್ವಾಮೀಜಿ, ಕ್ಷೇತ್ರದ ಸ್ಥಾಪಕ ವಂಶೀಯ ಅರಸರಾದ ಡಾ| ಪದ್ಮಪ್ರಸಾದ್ ಅಜಿಲ, ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ಕಾಮಗಾರಿಗಳ ದಾನಿಗಳಾದ ಪೆರಿಂಜೆ ರಾಜ್ಯಗುತ್ತು ದೇವಕುಮಾರ್ ಕಂಬಳಿ ಮತ್ತು ಕುಟುಂಬಸ್ತರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಸ್ವಯಂಸೇವಕರು ಮತ್ತು ಶ್ರಾವಕರು ಉಪಸ್ಥಿತರಿದ್ದರು.

Leave a Comment

error: Content is protected !!