April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

ಬೆಳ್ತಂಗಡಿ: ಜನಸ್ನೇಹಿ ಸಂಘ ಸುರ್ಯ ಮತ್ತು ಅಕ್ಷಯ ಸ್ವಸಹಾಯ ಸಂಘ ಬೊಳಿಯಂಜಿ, ಇದರ ಜಂಟಿ ಆಶ್ರಯದಲ್ಲಿ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ಫೆ. 24ರಂದು ಸುರ್ಯದ ಬೊಳಿಯಂಜಿ ವಾಲಿಬಾಲ್ ಕ್ರೀಡಾಂಗಣದಲ್ಲಿ ದಿ. ಪುರಂದರ ಪೂಜಾರಿ ಸುರ್ಯ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ – 2024 ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಪನ್ಯಾಸಕರಾದ ರಾಧಾಕೃಷ್ಣ ಭಟ್ ಬೊಳಿಯಂಜಿ ಇವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಅಶ್ವಥ್ ಪಡ್ಪು ಅಧ್ಯಕ್ಷರು ಜನಸ್ನೇಹಿ ಸಂಘ ಸುರ್ಯ ,ಡಾ| ಪ್ರದೀಪ್ , ರಾಜಶೇಖರ ಅಜ್ರಿ, ಶ್ರೀ ಆ್ಯಂಟನಿ ಟಿ.ಪಿ, ವಿಕಾಸ್ ಕುಮಾರ್ , ವಿಜಯ ಗೌಡ ನಡುಮನೆ, ಪ್ರವೀಣ್ ವಿ. ಜಿ, ಲೀಲಾವತಿ ಕಾನಂಗ್ , ಮುನಿರಾಜ ಅಜ್ರಿ , ಪ್ರಭಾಕರ ಮಯ್ಯ , ಸುಕೇಶ್ ಪೂಜಾರಿ ನೂಚಿಲ, ಪ್ರಕಾಶ್ ಫೆರ್ನಾಂಡೀಸ್ , ಶ್ರೇಯಾಂಸ್ ಜೈನ್, ಗಣೇಶ್ ಕೆರೆಕೋಡಿ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ವೇದಿಕೆಯಲ್ಲಿ ನಡ, ಕನ್ಯಾಡಿ, ನಾವೂರು, ಗ್ರಾಮಕ್ಕೆ ಸಂಬಂಧಪಟ್ಟ ಮೆಸ್ಕಾಂ ಇಲಾಖೆಯ ಪವರ್ ಮ್ಯಾನ್ ಗಳಾದ ಸುಧಾಕರ ಮತ್ತು ಅಶೋಕ ಇವರನ್ನು ಸನ್ಮಾನಿಸಲಾಯಿತು.
ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಸಂದೀಪ್ ಪೂಜಾರಿ ಗುರಿಪಳ್ಳ ಇವರ ಮಾಲಕತ್ವದ ಯಶ್ವಿನ್ ಆಟಾಕರ್ಸ್ ಸುರ್ಯ, ದ್ವಿತೀಯ ಬಹುಮಾನವನ್ನು ಡಾ| ಗಣೇಶ್ ಪ್ರಸಾದ್ ತಾರಕ್ ಹೊಟೇಲ್ ಮಾಲಕತ್ವದ ಗೆಳೆಯರ ಬಳಗ ಗುರಿಪಳ್ಳ, ತೃತೀಯ ಬಹುಮಾನವನ್ನು ಪಂಚದುರ್ಗ ಕೊಯ್ಯುರು ಮತ್ತು ಚತುರ್ಥ ಬಹುಮಾನವನ್ನು ಜನಸ್ನೇಹಿ ಸಂಘ ಸುರ್ಯ ತಂಡವು ಪಡೆದುಕೊಂಡಿತು.


ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಕಾರ್ಯದರ್ಶಿಯಾದ ಪದ್ಮನಾಭ ಗೌಡ ಸುರ್ಯ ಇವರು ನಿರ್ವಹಿಸಿದರು.

Related posts

ಮಚ್ಚಿನ : ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಮುಂಡಾಜೆ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತುಳುನಾಡ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್.ಜೆ ನಾಮಪತ್ರ ಸಲ್ಲಿಕೆ

Suddi Udaya

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಸುಲ್ಕೇರಿ ಒಕ್ಕೂಟದ ಸಹಯೋಗದಿಂದ ಜಲಸಂರಕ್ಷಣೆಯ ಅರಿವು ಕಾರ್ಯಕ್ರಮ

Suddi Udaya

ಮಹಾ ಕುಂಭಮೇಳದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಹಾಗೂ ಗಣೇಶ್ ಕುಂದರ್ ಬಳಗದವರಿಂದ ಶಾಹಿ ಸ್ನಾನ

Suddi Udaya
error: Content is protected !!