25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಾರಸ್ವತ ಲರ್ನಿಂಗ್ ಫೌಂಡೇಶನ್ ಯು.ಎಸ್.ಎ ಕ್ಯಾಲಿಪೋರ್ನಿಯಾ ವತಿಯಿಂದ ನಡ ಸ.ಪ್ರೌ. ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ನಡ : ಸರಕಾರಿ ಪ್ರೌಢಶಾಲೆ ನಡ ಪ್ರಸಕ್ತ 2023-24 ನೇ ಸಾಲಿನಲ್ಲಿ ಒಟ್ಟು 138 ವಿದ್ಯಾರ್ಥಿಗಳಿರುವ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಗಣಿತ, ಹಿಂದಿ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಪ್ರಯೋಗಶಾಲೆ ಮತ್ತು ಸ್ಮಾರ್ಟ್ ಕ್ಲಾಸ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನವೀನತೆಯ ಶಿಕ್ಷಣ ನೀಡುತ್ತಿರುವ ಮಾದರಿ ಸರಕಾರಿ ಶಾಲೆಯಲ್ಲಿ ಮಾ. 9 ರಂದು ಸಾರಸ್ವತ ಲರ್ನಿಂಗ್ ಫೌಂಡೇಶನ್ USA ಕ್ಯಾಲಿಪೋರ್ನಿಯಾ ಇವರ ವತಿಯಿಂದ ಶಾಲೆಯಲ್ಲಿ ಕಲಿಯುತ್ತಿರುವ ಪ್ರತೀ ವಿದ್ಯಾರ್ಥಿಗೆ ತಲಾ ವಿದ್ಯಾರ್ಥಿ ವೇತನ 1750/ (ಸಾವಿರದ ಏಳುನೂರ ಐವತ್ತು) ರೂ ನಂತೆ ವಿತರಿಸಲಾಯಿತು. ಹಾಗೂ ಮೂವರು ಅಡುಗೆ ಸಿಬಂದಿಯವರಿಗೆ ತಲಾ 3000 ದಂತೆ ಸಹಾಯ ಧನವನ್ನು ವಿತರಿಸಲಾಯಿತು.

ನಡ ಪ್ರೌಢಶಾಲೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಜಾಹ್ನವಿ ಕೆ ಎಸ್ ಇವರ ಸಹೋದರರಾಗಿರುವ ಕೆ ನರೇಂದ್ರನಾಥ್, ವ್ಯವಸ್ಥಾಪಕರು ಸಾರಸ್ವತ ಲರ್ನಿಂಗ್ ಫೌಂಡೇಶನ್ ಇವರು ಸತತ 5 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡುತ್ತಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ಈ ಸಂದರ್ಭ ಶ್ರೀಮತಿ ಜಾಹ್ನವಿ ಕೆ ಎಸ್ ನಿವೃತ್ತ ಪ್ರಥಮ ದರ್ಜೆ ಸಹಾಯಕರು, ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಚೆಕ್ ಮೂಲಕ ವಿದ್ಯಾರ್ಥಿ ವೇತನ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ‌ ಬಾಬು ಡಿ ಸಾರಸ್ವತ ಲರ್ನಿಂಗ್ ಫೌಂಡೇಶನ್ ಸಂಸ್ಥೆಯ ವ್ಯವಸ್ಥಾಪಕರಿಗೆ ಹಾಗೂ ಈ ವಿದ್ಯಾರ್ಥಿ ವೇತನದ ರೂವಾರಿಗಳಾದ ಶ್ರೀಮತಿ ಜಾಹ್ನವಿ ಕೆ ಎಸ್ ಧನ್ಯವಾದವಿತ್ತರು.

Related posts

ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ ರಿಂದ ರೋಟರಿ ಕುಟುಂಬದ ಶಿಕ್ಷಕ ಸದಸ್ಯರ ಸನ್ಮಾನ

Suddi Udaya

ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಮನೋಜ್ ಎನ್ ಸಾಲ್ಯಾನ್ ಆಯ್ಕೆ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಶೇ.50 ಡಿಸ್ಕೌಂಟ್ ಸೇಲ್

Suddi Udaya

ಚಲನಚಿತ್ರ ತಾರೆ ಡಿಂಪಲ್‌ ಕಪಾಡಿಯಾ ಧರ್ಮಸ್ಥಳ ಭೇಟಿ

Suddi Udaya

ಎ.29-30: ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನಕ್ಕೆ ಹಾಗೂ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀಮಜ್ಜಗದ್ಗುರುಗಳಾದ ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ

Suddi Udaya

ಶಿಬಾಜೆ: ನಾರಾಯಣ ಗುರು ಮಂದಿರಕ್ಕೆ ರಕ್ಷಿತ್ ಶಿವರಾಂ ರವರಿಂದ ಮರದ ಬಾಗಿಲು ಹಸ್ತಾಂತರ

Suddi Udaya
error: Content is protected !!