25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು: ಅಕ್ರಮವಾಗಿ ಮದ್ಯ ಮಾರಾಟ: ಬೆಳ್ತಂಗಡಿ ಪೊಲೀಸರಿಂದ ದಾಳಿ

ಕೊಯ್ಯೂರು : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಕೊಯ್ಯೂರು ಗ್ರಾಮದ ನೆಕ್ಕಿಲು ಎಂಬಲ್ಲಿ ಮಾ.21 ರಂದು ನಡೆದಿದೆ.

ಕೊಯ್ಯೂರು ಗ್ರಾಮದ ನೆಕ್ಕಿಲ್‌ ಬೆಳಾಲು ಅನಂತೋಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ಮಣ್ಣು ರಸ್ತೆಯ ಬದಿ, ಸಾರ್ವಜನಿಕ ಸ್ಥಳದಲ್ಲಿ, ಬೇರೆ ಬೇರೆ ವೈನ್ ಶಾಪ್ ಗಳಿಂದ ವಿಸ್ಕಿ ಸ್ಯಾಚೆಟ್ ಗಳನ್ನು ಖರೀದಿಸಿ ಹೆಚ್ಚು ಹಣಕ್ಕೆ ಮಾರಾಟಕ್ಕೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದ, ಕೊಯ್ಯೂರು ನಿವಾಸಿ ವಸಂತ (42) ಎಂಬಾತನನ್ನು‌ ವಶಕ್ಕೆ ಪಡೆದ, ಬೆಳ್ತಂಗಡಿ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಮುರುಳೀಧರ ನಾಯ್ಕರವರು ಹಾಗೂ ಸಿಬ್ಬಂದಿಗಳು, ಆತನ ಬಳಿಯಿದ್ದ 90 ಎಂ.ಎಲ್. ಪರಿಮಾಣದ ಒಟ್ಟು 53 ಸ್ಯಾಚೆಟ್‌ ಗಳನ್ನು (ಒಟ್ಟು ಮೌಲ್ಯ ರೂ 2125/- ) ಹಾಗೂ ಮದ್ಯ ಮಾರಾಟದಿಂದ ಸಂಗ್ರಹಿಸಿದ ಒಟ್ಟು ರೂ 230/- ರೂ ನಗದು ಹಣವನ್ನು ಸ್ವಾಧಿನಪಡಿಸಿಕೊಂಡು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 37/2024 ಕಲಂ: 32.34 ಕೆ ಇ ಆಕ್ಟ್‌ -1965 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಅಂಡಿಂಜೆ: ನಿಸರ್ಗ ಸಂಜೀವಿನಿ ಮಹಿಳಾ ಒಕ್ಕೂಟದಿಂದ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ವಿಚಾರಣೆಗೆ ಹಾಜರಾದ ಸಮೀರ್ ಎಂ.ಡಿ

Suddi Udaya

“ಶಾಂತಿವನ ಟ್ರಸ್ಟ್ ” ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ 31 ನೇ ವರ್ಷದ ರಾಜ್ಯಮಟ್ಟದ “ಜ್ಞಾನ ರಥ- ಜ್ಞಾನ ಪಥ” ನೈತಿಕ ಮೌಲ್ಯಾಧಾರಿತ ಪುಸ್ತಕ ಸ್ಪರ್ಧೆಗಳ ಪುರಸ್ಕಾರ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಸಂತ ಫ್ರಾನ್ಸಿಸ್ ಸಾವೆರ ವಾಳೆಯ ವತಿಯಿಂದ “ಪರಿಸರ ಸ್ವಚ್ಚತಾ ಆಂದೋಲನ”

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಎನ್.ಎಸ್.ಎಸ್ ಸ್ವಯಂ ಸೇವಕರ ಭೇಟಿ

Suddi Udaya
error: Content is protected !!