ಸೌತಡ್ಕ ದೇವಳದ ಸಮೀಪದಿಂದ ದನ ಕಳವು

Suddi Udaya

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಳದ ಸಮೀಪ ಅಂಗಡಿ ಎದುರುಗಡೆ ಮಲಗಿದ್ದ ಎರಡು ದನಗಳನ್ನು ಅಟ್ಟಾಡಿಸಿ ಒಂದು ದನವನ್ನು ಅಪಹರಿಸಿದ ಘಟನೆ ಮಾ.25ರಂದು ತಡರಾತ್ರಿ ನಡೆದಿದೆ.

ದನ ತುಂಬು ಗರ್ಭಿಣಿಯಾಗಿದ್ದು ಕಳವು ಮಾಡಿದ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಯಾವುದೇ ದೂರು ಪೊಲೀಸ್ ಠಾಣೆಗೆ ದಾಖಲಾಗಿಲ್ಲ.

Leave a Comment

error: Content is protected !!