ಮಾಚಾರು: ಕೋರ್ಯಾರು ನಿವಾಸಿ ಜಯಗೌಡ ನಿಧನ

Suddi Udaya

ಉಜಿರೆ: ಇಲ್ಲಿನ ಮಾಚಾರು ಕೋರ್ಯಾರು ನಿವಾಸಿ ಜಯಗೌಡ(78 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಾ.27ರಂದು ಸ್ವಗೃಹ ಮಾಚಾರಿನಲ್ಲಿ ನಿಧನ ಹೊಂದಿದರು.

ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ,ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

ಮೃತರು ಮಕ್ಕಳಾದ ಸುಳ್ಯ ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿನ ಶಿಕ್ಷಕ ದಿನೇಶ್ ಮಾಚಾರ್,ಪ್ರಗತಿ ಯುವಕ ಮಂಡಲ(ರಿ) ಮಾಚಾರು ಇದರ ಅಧ್ಯಕ್ಷ ಸೋಮಶೇಖರ್ ಕೆ ಸೇರಿದಂತೆ ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!