ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ವತಿಯಿಂದ ನೃತ್ಯ ಭಜನೋತ್ಸವ

Suddi Udaya

ಬೆಳ್ತಂಗಡಿ; ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ಸೂಳಬೆಟ್ಟು ಇದರ ವತಿಯಿಂದ ಅಳದಂಗಡಿ ಸನಿಹದ ಬರಾಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ರಥಬೀದಿಯಲ್ಲಿ ಮಾ.30 ರಂದು ಸಂಜೆ ನೃತ್ಯ ಭಜನೋತ್ಸವ ನೆರವೇರಿತು.


ದೇವಳದ ಅರ್ಚಕ ಭಾರ್ಗವ ಮರಾಠೆ ಜ್ಯೋತಿ ಪ್ರಜ್ವಾಲನೆ ಮಾಡುವ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಿದರು.

ಕುಣಿತ ಭಜನೆಯ ತರಬೇತುದಾರ ಸಂದೇಶ ಮದ್ದಡ್ಕ ಇವರಿಂದ ತರಬೇತು ಪಡೆದ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ 23 ವಿವಿಧ ಭಜನಾ ಮಂಡಳಿಗಳ 600 ಭಜಕರ ನೃತ್ಯವು ಭಕ್ತಿಯ ಸಂಚಲನಕ್ಕೆ ಕಾರಣವಾಯಿತು. ಉಜಿರೆಯ ಗಾನಸುರಭಿ ತಂಡದವರು ಹಾಡಿದ ಭಜನೆಗಳು ನೃತ್ಯ ಸಂಯೋಜನೆಗೆ ಮತ್ತಷ್ಟು ಮೆರುಗನ್ನು ನೀಡಿತು.


ದಂತ ವೈದ್ಯ ಡಾ| ಶಶಿಧರ ಡೋಂಗ್ರೆ ಹಾಗೂ ಪ್ರಗತಿಪರ ಕೃಷಿಕ ನಿರಂಜನ ಜೋಶಿ ಅವರು ಭಜನಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಿಯನ್ನು ನೀಡಿ ಗೌರವಿಸಿದರು. ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಉಪಸ್ಥಿತರಿದ್ದರು. ಮಂಡಳಿಗಳಿಗೆ, ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತೋಟದಪಲ್ಕೆಯ ನಿವಾಸಿ ಲಕ್ಷ್ಮೀ ಹಾಗೂ ಬರಾಯದ ವಿದ್ಯಾರ್ಥಿ ರವಿ ಎಂಬುವರಿಗೆ ಮಂಡಳಿ ವತಿಯಿಂದ ನೆರವನ್ನು ನೀಡಲಾಯಿತು.

ಸೂಳಬೆಟ್ಟು ಸ,ಕಿ.ಪ್ರಾ.ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ಮತ್ತು ಬಳಗದವರ ನೇತೃತ್ವದಲ್ಲಿ ನಡೆದ ಭಜನಾ ಕಮ್ಮಟದಲ್ಲಿ ರಾಮ್ ಕುಮಾರ್ ಮಾರ್ನಾಡು ಕಾರ್ಯಕ್ರಮ ನಿರ್ವಹಿಸಿದರು.

Leave a Comment

error: Content is protected !!