ಸುಳ್ಯೋಡಿ: ಮಾತೃಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ನಾವೂರು: ಸುಳ್ಯೋಡಿ ಗೆಳಯರ ಬಳಗ ಹಾಗೂ ಮಾತೃ ವೃಂದ ಸುಳ್ಯೋಡಿ ನಾವೂರು ಇವರ ವತಿಯಿಂದ ಮಾತೃಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾ.30ರಂದು ಉಳ್ಳಂಜ ವಾಸು ಪೂಜಾರಿ ರವರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ದಿಕ್ಸೂಚಿ ಭಾಷಣ ಮಾಡಿದರು.


ಮುಖ್ಯ ಅತಿಥಿಗಳಾಗಿ ನಾವೂರು ಆರೋಗ್ಯ ಕ್ಲಿನಿಕ್‌ನ ಡಾ| ಪ್ರದೀಪ್, ಬೆಳ್ತಂಗಡಿ ಸೆಂಟರ್‌ನ ಎಸಿಸಿಇ(ಐ) ಚೇರ್‌ಮೆನ್ ಜಗದೀಶ್ ಪ್ರಸಾದ್, ಗೆಳೆಯರ ಬಳಗದ ಅಧ್ಯಕ್ಷ ಸುರೇಶ್ ಪೊಯ್ಯೊಲೆ, ಹಿಂದೂ ಜಾಗರಣ ವೇದಿಕೆಯ ರವಿರಾಜ್ ಶೆಟ್ಟಿ ಕಡಬ, ಸುರೇಶ್ ಗೋಳಿದಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಸಂಜೆ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಸಂಭ್ರಮ, ಸಭಾ ಕಾರ್ಯಕ್ರಮ, ಮಾತೃ ಭೋಜನಾ, ಹಾಗೂ ಊರ ಮಕ್ಕಳಿಂದ ಸಾಂಸ್ಕೃತಿಕ ವೈಭವ ನಡೆಯಿತು.

Leave a Comment

error: Content is protected !!