April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಎ.13-15: ಪಡಂಗಡಿ ಪೆರಣಮಂಜ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದ ಜಾತ್ರೋತ್ಸವ

ಪಡಂಗಡಿ :ಪೆರಣಮಂಜ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದ ಜಾತ್ರೋತ್ಸವವು ಎ.13ರಿಂದ 15 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಎ.13 ಮೇಷ ಸಂಕ್ರಮಣದಂದು ಬೆಳಿಗ್ಗೆ ಗಂಟೆ 9.00ಕ್ಕೆ ಪ್ರಶ್ನೆ ಚಿಂತನೆ (ಸಾರಿ ಹಾಕುವುದು), ಗೊನೆ ಮುಹೂರ್ತ, ನಾಗ ದೇವರಿಗೆ ನವಕ ಪ್ರಧಾನ ತಂಬಿಲ, ಪ್ರಸನ್ನ ಪೂಜೆ ಮತ್ತು ಮೂಜಿಲ್ನಾಯ ಬ್ರಹ್ಮ ದೇವರಿಗೆ ನವಕ ಪ್ರಧಾನ, ಪ್ರಸನ್ನ ಪೂಜೆ. ಮಧ್ಯಾಹ್ನ ಗಂಟೆ 3.30ಕ್ಕೆ ಗ್ರಾಮಸ್ಥರಿಂದ ಅರ್ಪಿತವಾದ ಹೊರೆಕಾಣಿಕೆ ಸ್ವೀಕರಿಸಿ, ಉಗ್ರಾಣ ತುಂಬಿಸುವುದು. ಸಂಜೆ ಗಂಟೆ 4.30ಕ್ಕೆ ಚೆಂಡು, ರಾತ್ರಿ ಗಂಟೆ 8.00ಕ್ಕೆ ಧ್ವಜಾರೋಹಣ, ತಂಬಿಲ ಬಲಿ ಉತ್ಸವ, ಜಾಲಾಟ

ಎ.14ರಂದು ಸಂಜೆ ಗಂಟೆ 5.30ಕ್ಕೆ ನಡಿಬೆಟ್ಟು ಗುತ್ತಿನಿಂದ ಭಂಡಾರ ಹೊರಟು ಕ್ಷೇತ್ರಕ್ಕೆ ಬರುವುದು. ರಾತ್ರಿ ಗಂಟೆ 7.00ರಿಂದ 8.00ರ ವರೆಗೆ ಮಲ್ಲಿಪಾಡಿ ಶ್ರೀ ಸದಾಶಿವ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ, ರಾತ್ರಿ ಗಂಟೆ 7.30ರಿಂದ ಪೂಜೆ, ಬಲಿ ಉತ್ಸವ, ರಾತ್ರಿ ಗಂಟೆ 9.30ರಿಂದ ಮಹಾ ದೈವ ಮೂಜಿಲ್ನಾಯ, ಪಿಲಿಚಾಮುಂಡಿ, ಭೈರವ, ಪಂಜುರ್ಲಿ ನೇಮ, ನುಡಿಕಟ್ಟು, ಆಹಾರ ಬಲಿ, ಭಂಡಾರ ನಿರ್ಗಮನ

ಎ. 15ರಂದು ಬೆಳಿಗ್ಗೆ ಗಂಟೆ 6.00ಕ್ಕೆ ಅವಕೃತ, ಧ್ವಜಾವರೋಹಣ, ಸಂಪ್ರೋಕ್ಷಣೆ ಕಲಶ, ಪ್ರಸನ್ನ ಪೂಜೆ ನಡೆಯಲಿದೆ

Related posts

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

Suddi Udaya

ಎನ್ನೆಸ್ಸೆಸ್ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ

Suddi Udaya

ನಡ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ತಾಲೂಕಿನ ಬಡ ಮುಸ್ಲಿಂರನ್ನು ಅಜ್ಮೀರ್‌ಗೆ ಕಳುಹಿಸುವ ಪಿತೂರಿ: ಮತದಾರರು ಜಾಗೃತರಾಗಬೇಕು: ಸಲೀಂ ಗುರುವಾಯನಕರೆ

Suddi Udaya

ಪದ್ಮುಂಜ : ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಭಿತ್ತಿಪತ್ರಿಕೆ ಸ್ಪರ್ಧೆ

Suddi Udaya
error: Content is protected !!