ಬೆಳ್ತಂಗಡಿ ತಾ.ಪಂ. ನಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಕಾರ್ಯಕ್ರಮ ಮತ್ತು ಮತದಾನ ಜಾಗೃತಿ ಜಾಥಾ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಕಾರ್ಯಕ್ರಮ ಮತ್ತು ಮತದಾನ ಬಗ್ಗೆ ಜಾಗೃತಿ ಜಾಥಾ ತಾಲೂಕು ಪಂಚಾಯತ್ ಯಲ್ಲಿ ಏ.8ರಂದು ನಡೆಯಿತು.ಜಾಥಾದಲ್ಲಿ ಆಶಾ ಕಾರ್ಯಕರ್ತೆಯರು, ಪೊಸ್ಟ್ ಮ್ಯಾನ್‌ಗಳು ಇದ್ದರು.

ನಂತರ ತಾಲೂಕು ಸಭಾಂಗಣದಲ್ಲಿ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಸ್ವೀಪ್ ತಾಲೂಕು ಪಂಚಾಯತ್ ನ ಸದಸ್ಯೆ ಶುಭ ವಿಕಾಸ್ ಮತದಾನದ ಬಗ್ಗೆ ಮತಾನಾಡಿ ಮತದಾನ ಎಲ್ಲರೂ ಕಡ್ಡಾಯವಾಗಿ ಮಾಡಬೇಕು.

ಮತದಾನ ಮಾಡುವುದು ನಮ್ಮ ಹಕ್ಕು ನೋಟಾಕ್ಕಿಂತಲೂ ಹೆಚ್ಚು ಅರ್ಹರಿಗೆ ಮತದಾನ ಮಾಡಬೇಕು ಮತದಾನ ಮಾಡುವುದು ನಮ್ಮ ಜವಾಬ್ದಾರಿ ಇನ್ನೂ ಮೇ 26ಕ್ಕೆ ಮತಗಟ್ಟಕ್ಕೆ ಹೋಗಿ ಮತದಾನ ಮಾಡಬೇಕು ಎಂದು ಹೇಳಿದರು.

Leave a Comment

error: Content is protected !!