ದ.ಕ ಲೋಕಸಭಾ ಚುನಾವಣೆ: ವೀಕ್ಷಕರಾಗಿ ಹರೀಶ್ ಕುಮಾರ್ ನೇಮಕ

Suddi Udaya

ಬೆಳ್ತಂಗಡಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯರಿಗೆ ವೀಕ್ಷಕರಾಗಿ ಜವಾಬ್ದಾರಿಯನ್ನು ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕ್ಷಕರಾಗಿ ಹರೀಶ್ ಕುಮಾ‌ರ್ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾ‌ರ್ ಆದೇಶ ಮಾಡಿದ್ದಾರೆ.

ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವವರಿಗೆ ನಾನಾ ಜಿಲ್ಲೆಯ ಚುನಾವಣಾ ಕಾರ್ಯಕ್ರಮಗಳು, ಅಭಿಯಾನ ಹಾಗೂ ಇತರ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಲೋಕಸಭಾ ವ್ಯಾಪ್ತಿಯ ಚುನಾವಣಾ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವೀಕ್ಷಕರಾಗಿ ಹರೀಶ್ ಕುಮಾರ್, ಅವರು ನೇಮಕಗೊಂಡಿದ್ದಾರೆ. ಹರೀಶ್ ಕುಮಾರ್ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾಯ೯ನಿವ೯ಹಿಸುತ್ತಿದ್ದಾರೆ.
ಸಂಯೋಜಕರ ನೇಮಕ:
ಬೆಳ್ತಂಗಡಿ ಕ್ಷೇತ್ರವಿಧಾನ ಸಭಾ ಕ್ಷೇತ್ರದ ಸಂಯೋಜಕ ರಾಗಿ ಪ್ರತಿಭಾ ಕುಳಾಯಿ ನೇಮಕಗೊಂಡಿದ್ದಾರೆ.

Leave a Comment

error: Content is protected !!