24.3 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು: ಬಜಿಲ ಶ್ರೀ ವಿಷ್ಣುಮೂರ್ತಿ ಪುರುಷರ ಬಳಗದಿಂದ ಪುರುಷ ಪೂಜೆ, ಸನ್ಮಾನ

ಕೊಯ್ಯೂರು: ಇಲ್ಲಿನ ಬಜಿಲ ಇಲ್ಲಿನ ಶ್ರೀ ವಿಷ್ಣುಮೂರ್ತಿ ಪುರುಷರ ಬಳಗದ ಈ ವರ್ಷದ ಪುರುಷ ಪೂಜೆ ಕಾರ್ಯಕ್ರಮ ಮೇಗಿನ ಬಜಿಲ ಲಕ್ಷ್ಮಣ ಗೌಡರ ಮನೆಯಲ್ಲಿ ಏ. 14ರಂದು ನಡೆಯಿತು.

ಈ ಸಂದರ್ಭ ಆಯೋಜಿಸಿದ್ದ 4ನೇ ವರ್ಷದ ಸನ್ಮಾನ ಸಭಾ ಕಾರ್ಯಕ್ರಮದಲ್ಲಿ ಪುರುಷ ಕುಣಿತದ ಹಿರಿಯ ಕಲಾವಿದರಾದ ಮೋನಪ್ಪ ಗೌಡ ಬಜಿಲ, ವೆಂಕಪ್ಪ ಗೌಡ ಬಜಿಲ, ಬೂಚ ಗೌಡ ಬಜಿಲ, ನೀಲಪ್ಪ ಗೌಡ ನೇಲ್ಯಲ್ಕೆ, ಧರ್ಣಪ್ಪ ಗೌಡ ಬೀಜದಡಿ, ಸಾಂತಪ್ಪ ಮಲೆಕುಡಿಯ ಸಾದೂರು ಮೊದಲಾದವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನೀಲಪ್ಪ ಗೌಡ ನೇಲ್ಯಲ್ಕೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಗಿನ ಬಜಿಲ ಲಕ್ಷ್ಮಣ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಯ್ಯೂರು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕುಮಾರ್ ಅಗ್ರಸಾಲೆ ಭಾಗವಹಿಸಿದ್ದರು. ಅವರು ಪುರುಷ ಕುಣಿತದ ವಿಶಿಷ್ಟತೆ ಬಗ್ಗೆ ಮಾತನಾಡಿ ಇದೊಂದು ಕಾರ್ಣಿಕದ ಕಲೆ; ಇದನ್ನು ಉಳಿಸಲು ನಾವೆಲ್ಲ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಅಶೋಕ್ ಕುಮಾರ್ ಅವರನ್ನು ಪುರುಷರ ಬಳಗದಿಂದ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಲಿಂಗಪ್ಪ ಗೌಡ ಮೇಗಿನ ಬಜಿಲ, ತಿಮ್ಮಯ್ಯ ಗೌಡ ಕೋಂಗುಜೆ, ವೆಂಕಪ್ಪ ಗೌಡ ಕೋರ್ಯಾರು ಉಪಸ್ಥಿತರಿದ್ದರು.
ಮೂರು ದಿನಗಳ ತಿರುಗಾಟದ ವೇಳೆ ಕಿರೀಟ ಧರಿಸಿದ ಮಕ್ಕಳನ್ನು ಪುಸ್ತಕ ಮತ್ತು ಕಂಪಾಸ್ ನೀಡಿ ಪ್ರೋತ್ಸಾಹಿಸಲಾಯಿತು.
ಗಿರಿಧರ ಗೌಡ ಕಜೆಕೋಡಿ ಸ್ವಾಗತಿಸಿದರು.
ದೀಪಿಕಾ ದಿವ ಕೊಕ್ಕಡ ಪ್ರಾರ್ಥನೆ ಮಾಡಿದರು. ದಿವ ಕೊಕ್ಕಡ ನಿರೂಪಿಸಿ, ಮೋನಪ್ಪ ಸಾಲಿಯಾನ್ ವಂದಿಸಿದರು.

Related posts

ಮೊರಾರ್ಜಿ ದೇಸಾಯಿ/ಇಂದಿರಾಗಾಂಧಿ/ ಡಾ. ಬಿಆರ್ ಅಂಬೇಡ್ಕರ್/ನಾರಾಯಣ ಗುರು ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭೇಟಿ, ದೇವರ ದರ್ಶನ

Suddi Udaya

ಜೂ.9: ಪಡಂಗಡಿಯಲ್ಲಿ ಉಚಿತ ವೈದ್ಯಕೀಯ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಗೇರುಕಟ್ಟೆ :ಪರಪ್ಪು ಜಮಾಅತ್ ನಿಂದ ಅಭಿನಂದನಾ ಸಭೆ: ದರ್ಗಾ ಸುತ್ತಮುತ್ತ ಶಾಶ್ವತ ಕಾಮಗಾರಿ ನಡೆಸಿದ ಮುಸ್ಲಿಮ್ ಯೂತ್ ವಿಂಗ್ ಸಮಿತಿಗೆ ಗೌರವಾರ್ಪಣೆ

Suddi Udaya

ನಿಡ್ಲೆ: ನೆಡಿಲು ನಾರಾಯಣ ಗೌಡರವರ ತೋಟಕ್ಕೆ ನುಗ್ಗಿದ್ದ ಒಂಟಿ ಸಲಗ: ಹಲವು ಬಾಳೆ ಗಿಡ ಹಾಗೂ ಅಡಿಕೆ ಗಿಡಗಳಿಗೆ ಹಾನಿ

Suddi Udaya

ಧರ್ಮಸ್ಥಳ: ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮ

Suddi Udaya
error: Content is protected !!