ಬೆಳ್ತಂಗಡಿ ಚರ್ಚ್ ರೋಡ್ ಬಳಿ ಚರಂಡಿಗೆ ವಾಲಿದ ಕಾರು

Suddi Udaya

ಬೆಳ್ತಂಗಡಿ: ಇಲ್ಲಿಯ ಚರ್ಚ್ ರೋಡ್ ಬಳಿ ಸ್ವಿಫ್ಟ್ ಕಾರು ಚರಂಡಿಗೆ ವಾಲಿದ ಘಟನೆ ಎ.20ರಂದು ನಡೆದಿದೆ.

ರಸ್ತೆ ಅಗಲೀಕರಣ ಕಾಮಗಾರಿ ಕೆಲವು ತಿಂಗಳುಗಳ ಹಿಂದೆ ಚರಂಡಿಯ ಕೆಲಸ ನಡೆಯದೆ ಅರ್ಧದಲ್ಲಿ ಸ್ಥಗಿತಗೊಳಿಸಿದ ಕಾರಣ ಜನ ಸಾಮಾನ್ಯರು ಅಂಗಡಿ ವ್ಯಾಪಾರಸ್ಥರು ಕಷ್ಟವನ್ನು ಅನುಭವಿಸುತ್ತಿದ್ದರು. ಈಗ ಮಳೆ ಪ್ರಾರಂಭವಾದ ಕಾರಣ ಅಗೆದ ಚರಂಡಿಗೆ ಮಣ್ಣು ತುಂಬಿಸಿದ್ದು ಮಳೆ ಬಂದ ಸಂದರ್ಭದಲ್ಲಿ ಚರಂಡಿಯ ಅರಿವಾಗದೆ ವಾಹನ ಚಾಲಕರು ಬಂದು ಚರಂಡಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚನ್ನರಾಯಪಟ್ಟಣದಿಂದ ಮಂಗಳೂರಿಗೆ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ನಾಲ್ಕು ಜನರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.

Leave a Comment

error: Content is protected !!