ಉಜಿರೆಯಲ್ಲಿ ಲೋಕಕಲ್ಯಾಣಾರ್ಥ “ಶ್ರೀ ವಿಷ್ಣು ಯಾಗ”   

Suddi Udaya

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ  ಪಡುವೆಟ್ನಾಯರ  ನೇತೃತ್ವ,  ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಉಜಿರೆ ವಲಯದ ವತಿಯಿಂದ  ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ ಅವರಿಂದ ಸಮಾಜ ಹಾಗು ಲೋಕ ಕಲ್ಯಾಣಾರ್ಥ ಎ 23 ರಂದು ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ   ವೇದಮೂರ್ತಿ  ದುರ್ಗಾಪ್ರಸಾದ್ ಕೆರ್ಮುಣ್ಣಾಯ ಅವರ ಪೌರೋಹಿತ್ಯದಲ್ಲಿ “ಶ್ರೀ ವಿಷ್ಣು ಯಾಗ “ನಡೆಯಿತು. 

ವಿಪ್ರ ಬಾಂಧವರು ಹಾಗು ಮಹಿಳಾ ಸದಸ್ಯೆಯರು ಸಾಮೂಹಿಕ  ಶ್ರೀ ವಿಷ್ಣು ಸಹಸ್ರನಾಮ ಪಠಣ ದಲ್ಲಿ ಭಾಗವಹಿಸಿದ್ದರು. ವಸಂತ ವೇದ ಪಾಠ ಶಿಬಿರದ  ವಟುಗಳು ಶ್ರೀ ವಿಷ್ಣು ಸಹಸ್ರ ನಾಮಾವಳಿ ಪಠಣಗೈದರು .  ಮದ್ಯಾಹ್ನ ಯಾಗದ ಪೂರ್ಣಾಹುತಿ ನಡೆದು ಪ್ರಸಾದ ವಿತರಣೆ  ಹಾಗೂ ಸಂತರ್ಪಣೆ ನಡೆಯಿತು.

Leave a Comment

error: Content is protected !!