ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಆನಂದ ಪಾದೆ ರವರಿಗೆ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿಯಿಂದ ಚಿಕಿತ್ಸಾ ನೆರವು

Suddi Udaya


ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮನಿಧಿ ಯೋಜನೆಯ ೧೩ನೇ ಸಹಾಯಧನವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಮಾಲಕರ ಸಂಘ ಬಿಎಂಎಸ್ ಸಂಯೋಜಿತ ಮಡಂತ್ಯಾರು ವಲಯದ ಸದಸ್ಯ ಆನಂದ ಪಾದೆ ರವರಿಗೆ ರೂ. ೪ ಸಾವಿರವನ್ನು ಸಂಘದ ಅಧ್ಯಕ್ಷ ಸಂದೀಪ್ ಕುಂದರ್‌ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಜಯರಾಮ ಗೌಡ ಪಾಲ್ಲಡ್ಕ, ಪ್ರ. ಕಾರ್ಯದರ್ಶಿ ಶಿವರಾಮ ಮಡಿವಾಳ, ಉಪಾಧ್ಯಕ್ಷ ಹಮೀದ್ ಪಾಂಡವರಕಲ್ಲು, ಸದಸ್ಯ ಸುಲೇಮಾನ್ ಉಪಸ್ಥಿತರಿದ್ದರು.

Leave a Comment

error: Content is protected !!