24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿ

ಚುನಾವಣಾ ಕೇಂದ್ರದ ಎಡವಟ್ಟು: ಮತಗಟ್ಟೆ ಸಂಖ್ಯೆ ಬದಲಾವಣೆ: ಕೊಕ್ಕಡದಿಂದ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಿದ ಮತದಾರ

ಕೊಕ್ಕಡದಲ್ಲಿ ಮತ ಚಲಾಯಿಸಬೇಕಿದ್ದ ಮತದಾರರೊಬ್ಬರು ಮತಗಟ್ಟೆ ಸಂಖ್ಯೆ ಬದಲಾಗಿ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಬೇಕಾಗಿ ಬಂದ ಘಟನೆ ಎ.26ರಂದು ನಡೆದಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಕೊಕ್ಕಡ ಬಳಿಯ ಅಶೋಕ ಎಂಬವರಿಗೆ ಮತಗಟ್ಟೆ ಸಂಖ್ಯೆ 23ರಲ್ಲಿ (ಕಾಪಿನಬಾಗಿಲು ಸೈಂಟ್ ಜೋನ್ ಅನುದಾನಿತ ಹಿ.ಪ್ರಾ.ಶಾಲೆ ಕೌಕ್ರಾಡಿ) ಮತ ಚಲಾಯಿಸಬೇಕಿತ್ತು. ಅಶೋಕರವರು ಈ ಹಿಂದೆ ಪುಣೆಯಲ್ಲಿ ಉದ್ಯೋಗ ಮಾಡಿಕೊಂಡು ಅಲ್ಲೇ ಇದ್ದ ಕಾರಣ ಮತ ಚಲಾಯಿಸಲು ಅಲ್ಲಿಯ ಮತದಾನ ಕೇಂದ್ರವನ್ನು ಆಶ್ರಯಿಸಿದ್ದರು. ಆದರೆ ಅವರು ಇತ್ತೀಚೆಗೆ ಕೊಕ್ಕಡದ ತನ್ನ ಊರಿಗೆ ಬಂದು ನೆಲೆಸಿದ ಕಾರಣ ಮತದಾನ ಕೇಂದ್ರವನ್ನು ಊರಿಗೆ ಬದಲಾಯಿಸಿದ್ದರು. ಮತದಾನ ಕೇಂದ್ರ ಬದಲಾಯಿಸುವ ಸಂದರ್ಭದಲ್ಲಿ ಚುನಾವಣಾ ಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ 23ರ ಬದಲು 213 ಎಂದು ನಮೂದಾಗಿ ಎಡವಟ್ಟಾಯಿತು. ಇದರಿಂದಾಗಿ ಅಶೋಕರವರಿಗೆ 23ರ ಮತಗಟ್ಟೆ ಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ವೆಬ್ ಸೈಟ್ ಮೂಲಕ ಸರ್ಚ್ ಮಾಡಿ 213 ಮತಗಟ್ಟೆ ಕೇಂದ್ರವು ಮರ್ಕಂಜದಲ್ಲಿ ಮಿತ್ತಡ್ಕದಲ್ಲಿ ಬರುವುದನ್ನು ಖಚಿತಪಡಿಸಿ ಸುಮಾರು 52ಕಿ.ಮೀ. ದೂರ ಬಂದು ಮಿತ್ತಡ್ಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಮತ ಚಲಾಯಿಸಿದರು.

ಅಶೋಕರವರ ಮನೆಯವರು 23ನೇ ಮತಗಟ್ಟೆಯಲ್ಲಿಯೇ ಮತ ಚಲಾಯಿಸಿದ್ದಾರೆ. “ನಾನು ದೇಶಕ್ಕಾಗಿ ಇಲ್ಲಿಗೆ ಬಂದು ಮತ ಚಲಾಯಿಸಿದ್ದೇನೆ” ಎಂದು ಅಲ್ಲಿ ಸೇರಿದ್ದ ಕಾರ್ಯಕರ್ತರೊಡನೆ ತನ್ನ ಮಾತನ್ನು ಹಂಚಿಕೊಂಡಿದ್ದಾರೆ.

Related posts

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಪವನ್ ಸಾಲ್ಯಾನ್ ಆಯ್ಕೆ

Suddi Udaya

ಎಸ್ ಎ ಫ್ರೆಂಡ್ಸ್ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮಾರನಾರ್ಥಕ ಕಬಡ್ಡಿ ಪಂದ್ಯಾಟ

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ

Suddi Udaya

ಶಿಶಿಲ: ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಕಪಿಲಾ ನದಿ

Suddi Udaya

ಸಹಾಯಕ ಕಾನೂನು ಅಭಿರಕ್ಷಕರಾಗಿ ನ್ಯಾಯವಾದಿ ಕುಮಾರಿ ಸ್ವಾತಿ ಕುಲಾಲ್ ನೇಮಕ

Suddi Udaya

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷರಾಗಿ ದಯಾಮಣಿ, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

Suddi Udaya
error: Content is protected !!