30.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪೂಜಾ ಕಾರ್ಯಕ್ರಮದ ಊಟದ ವೇಳೆ ಕುಟುಂಬಸ್ಥರಿಂದ ಹಲ್ಲೆ, ಜೀವಬೆದರಿಕೆ ಆರೋಪ; ಧರ್ಮಸ್ಥಳ ಠಾಣೆಗೆ ದೂರು

ಕಳೆಂಜ: ಪೂಜಾ ಕಾರ್ಯಕ್ರಮದ ನಿಮಿತ್ತ ಊಟದ ವ್ಯವಸ್ಥೆ ಏರ್ಪಡಿಸಿರುವ ಸಮಯ ಐದು ಮಂದಿ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಕಳೆಂಜ ಗ್ರಾಮದ ಸೇಸಮ್ಮ ಎಂಬವರು ಧರ್ಮಸ್ಥಳ ಪೊಲೀಸ್‌ರಿಗೆ ದೂರು ನೀಡಿದ್ದಾರೆ.


ಸೇಸಮ್ಮ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಾನು ತನ್ನ ಕಿರಿಯ ಮಗ ಹರೀಶನೊಂದಿಗೆ ವಾಸವಾಗಿದ್ದು, ಎ.30 ರಂದು ರಾತ್ರಿ, ಪೂಜಾ ಕಾರ್ಯಕ್ರಮದ ನಿಮಿತ್ತ, ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಏರ್ಪಡಿಸಿದ್ದೇವು. ಈ ವೇಳೆ ಕುಟುಂಬಸ್ಥರಾದ ಯೋಗೀಶ್, ಆನಂದ ಬೀಜದಡಿ, ಶೇಖರ್, ಆನಂದ ಕುಲಾಡಿ, ಅಣ್ಣುಗೌಡ, ಹರೀಶ್ ಮತ್ತು ಪುಷ್ಪ ಎಂಬವರುಗಳು, ನಾನು ವಾಸಿಸುವ ಕೊಠಡಿಯ ಬಳಿಗೆ ಬಂದು ಹರೀಶನಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಸ್ವಲ್ಪ ಸಮಯದ ಬಳಿಕ ಯೋಗೀಶ ಎಂಬಾತ ಬಂದು, ಹರೀಶನಿಗೆ ಹಾಗೂ ಆತನ ಭಾವ ದೀಕ್ಷಿತ್ ಎಂಬಾತನಿಗೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ನನ್ನನ್ನು ಆರೋಪಿತರೆಲ್ಲರೂ ಸೇರಿ ದೂಡಿ ಹಾಕಿ ಗಾಯಗೊಳಿಸಿ, ಜೀವ ಬೆದರಿಕೆ ಹಾಕಿರುದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ,ಅ ಕ್ರ ೨೮/೨೦೨೪, ಕಲಂ: ೪೪೮,೫೦೪, ೩೨೩,೫೦೬ ಜೊತೆಗೆ ೩೪ ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಗೇರುಕಟ್ಟೆ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ಉಸ್ಮಾನ್ ಗರ್ಡಾಡಿರವರು ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿಗೊಂಡು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನಿಯುಕ್ತಿ

Suddi Udaya

ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್; ಶೇ 50ರಷ್ಟು ರಿಯಾಯಿತಿ: ಖರೀದಿಗೆ ಮುಗಿಬಿದ್ದ ಜನರು

Suddi Udaya

ಎ.6: ಬೆಂಗಳೂರು ಶ್ರೀ‌ ಪ್ರಸನ್ನ ಕಾರ್ಯಸಿದ್ದಿ ಬೈಲಾಂಜನೇಯ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ ಹಾಗೂ ಸವಣಾಲು ಪಲ್ಗುಣಿ ಭಜನಾ ತಂಡ

Suddi Udaya

ಯೋಧರ ರಕ್ಷಣೆಗಾಗಿ ಲಾಯಿಲ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ದುರ್ಗಾಪೂಜೆ

Suddi Udaya
error: Content is protected !!