ಕಣಿಯೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಕಣಿಯೂರು: ಶೌರ್ಯ ವಿಪತ್ತು ನಿರ್ವಹಣಾ ಕಣಿಯೂರು ಘಟಕದ ವತಿಯಿಂದ ಕಣಿಯೂರು ಆಯುರ್ವೇದ ಚಿಕಿತ್ಸಾಲಯದ ವಠಾರದಲ್ಲಿರುವ ಔಷಧಿ ಗಿಡಗಳ ಬದಿಯಲ್ಲಿರುವ ಪೊದೆಗಳನ್ನು ತೆಗೆದು ಸ್ವಚ್ಛತಾ ಶ್ರಮದಾನ ಕಾರ್ಯವನ್ನು ಮೇ 04ರಂದು ನಡೆಸಲಾಯಿತು.

ಈ ಸ್ವಚ್ಛತಾ ಸೇವಾಕಾರ್ಯದಲ್ಲಿ ಸ್ವಯಂಸೇವಕರಾದ ಪುರುಷೋತ್ತಮ, ಉಮೇಶ್, ಶ್ರೀಲತಾ, ಶರತ್, ಲೋಕೇಶ್, ಚಂದ್ರಕಲಾ,ಸೇವಾ ಪ್ರತಿನಿಧಿ ಪ್ರೇಮಾ, ಉಪಸ್ಥಿತರಿದ್ದರು ಕಣಿಯೂರು ವಲಯ ಮೇಲ್ವಿಚಾರಕರಾದ ಶಿವಾನಂದ ಜೊತೆಯಿದ್ದು ಉತ್ತಮ ಸಹಕಾರ ನೀಡಿದರು. ,

ಆಸ್ಪತ್ರೆ ವೈದ್ಯಾಧಿಕಾರಿ ಸಹನಾ, ಅಟೆಂಡರ್ ರಾಜೀವಿ ಯವರು ಸೇವಾಕಾರ್ಯಕ್ಕೆ ಸಹಕರಿಸಿದ ಸಂಘಕ್ಕೆ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave a Comment

error: Content is protected !!