September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ : ಸಿದ್ಧವನ ಗುರುಕುಲದಲ್ಲಿ “ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಕಾಲೇಜು ಸಾಂಸ್ಕೃತಿಕ ಸಮಿತಿ ಹಾಗೂ ಕಲಾಕೇಂದ್ರದ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ” ಸುಧನ್ವ ಮೋಕ್ಷ ” ಯಕ್ಷಗಾನ ಪ್ರದರ್ಶನವು ಮೇ.5 ರಂದು ಸಂಜೆ ಉಜಿರೆ ಸಿದ್ಧವನ ಗುರುಕುಲದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಸಿಂಚನ ಮೂಡುಕೋಡಿ, ಚೆಂಡೆಯಲ್ಲಿ ಆದಿತ್ಯ ಹೊಳ್ಳ, ಮದ್ದಳೆಯಲ್ಲಿ ಪುರಂದರ ನಾರಿಯ, ಮುಮ್ಮೇಳದಲ್ಲಿ ಅರ್ಜುನನಾಗಿ ಸೌರವ್ ಶೆಟ್ಟಿ, ವೃಷಕೇತು – ಸೌಜನ್ಯ, ಪ್ರದ್ಯುಮ್ನ – ಶ್ರುತಿ, ಅನುಸಾಲ್ವ-ಜಿವಿ ವಿಜೇತ್, ದೂತ -ಅಮೋಘ ಶಂಕರ್, ಹಂಸಧ್ವಜ -ಕೀರ್ತನ್ ಯು, ಸುಧನ್ವ- ಜಿ ಸುಬ್ರಹ್ಮಣ್ಯ, ಸುಗರ್ಭೆ – ಸಾಕ್ಷಿ ಎಂ ಕೆ, ಪ್ರಭಾವತಿ – ದೀಪಶ್ರೀ, ಕೃಷ್ಣ- ಪ್ರಾವಿಣ್ಯ, ರಂಗ ಸಜ್ಜಿಕೆಯಲ್ಲಿ ಮೋನಿಷಾ ಕೆ.ಎಲ್ ಹಾಗೂ ಮನಸ್ವಿನಿ. ನಿರ್ದೇಶನವನ್ನು ಅರುಣ್ ಕುಮಾರ್ ಧರ್ಮಸ್ಥಳ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಬಿ. ಭುಜಬಲಿ ಧರ್ಮಸ್ಥಳ, ಸೋನಿಯಾ ಯಶೋವರ್ಮ, ಇನ್ನಿತರ ಗಣ್ಯರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಶಾಸಕ ಹರೀಶ್ ಪೂಂಜ ಸಾರಥ್ಯದಲ್ಲಿ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೋಸೆ ಹಬ್ಬಕ್ಕೆ ಚಾಲನೆ

Suddi Udaya

ಕೊಯ್ಯೂರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: ಏಷಿಯನ್ ಯೋಗ ಚಾಂಪಿಯನ್ ಚಿನ್ನದ ಪದಕ ವಿಜೇತೆ ನಿರ್ಮಲಾ ಸುಭಾಷ್ ಕೊಡ್ಲಿಕಾರ ಅಭಿನಂದನೆ

Suddi Udaya

ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಮಟ್ಟದ ಜನಸ್ಪಂದನ ಸಭೆ

Suddi Udaya

ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಮತ್ತು ದಿ.ಮಾಚಾರು ಗೋಪಾಲ ನಾಯ್ಕರ ಸಂಸ್ಮರಣೆ

Suddi Udaya

ಸೆ. 14 – 21: ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟ

Suddi Udaya

ಬೆಳ್ತಂಗಡಿ ಲಿಯೋ ಕ್ಲಬ್ ಗೆ ‘ಉದಯೋನ್ಮುಖ ನಕ್ಷತ್ರ’ ಅವಾರ್ಡ್

Suddi Udaya
error: Content is protected !!