September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಸರಸ್ವತಿ ಭಜನಾ ಮಂದಿರಕ್ಕೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಭೇಟಿ

ಉಜಿರೆ : ಶ್ರೀ ಸರಸ್ವತಿ ಭಜನಾ ಮಂದಿರ ( ರಿ) ವಿವೇಕಾನಂದ ನಗರ ಉಜಿರೆ ಇಲ್ಲಿ ನಡೆಯುತ್ತಿದ್ದ ವಾರದ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಇವರು ಭಾಗವಹಿಸಿದರು. ಭಜನಾ ಮಂಡಳಿಯ ವತಿಯಿಂದ ಇವರನ್ನು ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ರವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ದನ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.


ಭಜನಾ ಕಾರ್ಯಕ್ರಮದ ನಂತರ ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿಯವರು ಭಜನಾ ಮಂಡಳಿಗಳಲ್ಲಿ ಹಿಂದೆ ನಡೆಯುತ್ತಿದ್ದ ಭಜನೆ ಈಗ ಬದಲಾವಣೆಯ ದಾರಿಯಲ್ಲಿ ಆಗುತ್ತಿರುವ ಭಜನೆ ಹಾಗೂ ಇದರಿಂದ ಮುಂದಿನ ದಿನಗಳಲ್ಲಿ ನಡೆಯಬಹುದಾದ ಭಜನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಭಜನಾ ಮಂಡಳಿಯ ಪದಾಧಿಕಾರಿಗಳೊಂದಿಗೆ ಹಾಗೂ ಸದಸ್ಯರುಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಕೆಲವು ಸಲಹೆಗಳನ್ನು ಸ್ವೀಕರಿಸಿದರು.


ಭಜನಾ ಮಂಡಳಿಯ ಜೊತೆ ಕಾರ್ಯದರ್ಶಿಯಾದ ವಿನೋದ್ ಕುಮಾರ್ ರವರು ಸ್ವಾಗತಿಸಿ, ವಂದಿಸಿದರು.

Related posts

ಶಿಶಿಲ :ಹರೀಶ್ ಪೂಂಜಾ ಅಭಿಮಾನಿ ಬಳಗದಿಂದ ಶಾಲಾ ಮಕ್ಕಳಿಗೆ ಪೆನ್ ವಿತರಣೆ

Suddi Udaya

ಸಾರ್ವಜನಿಕ ಸೇವೆಯಲ್ಲಿ ಸಾರ್ಥಕದ 52 ಸಂವತ್ಸರಗಳನ್ನು ಪೂರೈಸಿದ ಬೆಳ್ತಂಗಡಿ ಲಯನ್ಸ್ ಕ್ಲಬ್-ಮಾ.22: ಲಯನ್ಸ್ ಸೇವಾ ಭವನದ ಉದ್ಘಾಟನಾ ಸಮಾರಂಭ

Suddi Udaya

ಸ್ವಂತ ಮನೆಯ ಕನಸನ್ನು ನನಸಗಿಸಲು “ಡ್ರೀಮ್ ಡೀಲ್ ಗ್ರೂಪ್” ವಿಶಿಷ್ಟ ಸೇವಿಂಗ್ಸ್ ಪ್ಲಾನ್ ಯೋಜನೆ – ಕೇವಲ 1 ಸಾವಿರ ಪಾವತಿಸಿ ಮನೆ, ಕಾರು, ಬೈಕ್, ಚಿನ್ನ ಗೆಲ್ಲಿರಿ

Suddi Udaya

ಉಜಿರೆ ಆಟೋ ಚಾಲಕರ ಮಹಾಸಭೆ

Suddi Udaya

ಜೀವನದ ಧನಾತ್ಮಕ ತಿರುವಿಗೆ ಎನ್ನೆಸ್ಸೆಸ್ ಪೂರಕ – ಡಾ. ಟಿ. ಕೃಷ್ಣಮೂರ್ತಿ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ

Suddi Udaya
error: Content is protected !!