ಸುಲ್ಕೇರಿ: ಕೇಡೇಲು ಪರಿಸರಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

Suddi Udaya

ಸುಲ್ಕೇರಿ: ಸುಲ್ಕೇರಿ ಗ್ರಾಮದ ತೀರಾ ಹಿಂದುಳಿದ ಪ್ರದೇಶವಾದ ಕೇಡೇಲು ಪರಿಸರಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಮೇ 14 ರಂದು ಖಾಸಗಿ ಭೇಟಿ ನೀಡಿದರು.


ಸೆಲ್ಕೋ ಸಂಸ್ಥೆಯ ಗುರುಪ್ರಸಾದ್ ಶೆಟ್ಟಿ, ಉದಯ, ಗಿರಿಜಾ, ಸುರೇಶ್, ಗಿರೀಶ್ ಗೌಡ, ಕೆಂಪರಾಜು, ನವೀನ್ ನೆರಿಯ ಇವರ ಜತೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಕೆಲವು ಮನೆಗಳಿಗೆ ಭೇಟಿ ನೀಡಿದರು.


ಕೇಡೇಲು ಪರಿಸರದಲ್ಲಿ ಏಳು ಮನೆಗಳಿದ್ದು ಇಲ್ಲಿಗೆ ಸರಿಯಾದ ರಸ್ತೆ ಹಾಗು ವಿದ್ಯುತ್ ವ್ಯವಸ್ಥೆ ಕೂಡ ಇರುವುದಿಲ್ಲ.ಇಲ್ಲಿನ ಜನಜೀವನ ಕುರಿತು ವೀಕ್ಷಿಸಿ, ಮಾತನಾಡಿ “ನಮ್ಮ ನಿರ್ಧಾರಗಳು ಕಟ್ಟ ಕಡೆಯ ವ್ಯಕ್ತಿಗಳ ಜೀವನಕ್ಕೆ ಬೆಳಕಾಗಬೇಕು. ಅಂತಹ ವ್ಯವಸ್ಥೆಯನ್ನು ಇಲ್ಲಿ ಸೆಲ್ಕೋ ಸಂಸ್ಥೆ ನಿರ್ವಹಿಸಿರುವುದು ಶ್ಲಾಘನೀಯ. ಆಯ್ಕೆ ಮಾಡಿಕೊಳ್ಳುವ ಕಾರ್ಯಗಳಿಂದ ಜನರಿಗೆ ಉಪಯೋಗವಾದರೆ ಮಾಡಿದ ಕೆಲಸದಲ್ಲಿ ತೃಪ್ತಿ ಸಿಗುತ್ತದೆ” ಎಂದರು.

Leave a Comment

error: Content is protected !!