ವೇಣೂರು: ಉಳ್ತೂರು ನೂರುಲ್ ಹುದಾ ದರ್ಸ್ ವಿದ್ಯಾರ್ಥಿ ಸಾಹಿತ್ಯ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ವೇಣೂರು ಸಮೀಪದ ಉಳ್ತೂರು ಮಸೀದಿಯಲ್ಲಿ ನಾಲ್ಕು ವರ್ಷಗಳಿಂದ ಸಾದಾತ್ ತಂಙಳ್ ರವರ ನೇತೃತ್ವದಲ್ಲಿ ಅವರ ತಾಯಿಯ ಸೆಯ್ಯಿದತ್ ಹಲೀಮ ಬೀವಿ ಅವರ ಹೆಸರಿನಲ್ಲಿ ಸ್ಥಾಪಿಸಿದ ನೂರುಲ್ ಹುದಾ ದರ್ಸ್ ಇದರ ವಿದ್ಯಾರ್ಥಿಗಳ ಸಾಹಿತ್ಯ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಲಹೆಗಾರರರಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಹಾಗೂ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ, ಅದ್ಯಕ್ಷರಾಗಿ ರಾಫಿಹ್ ಬುಳ್ಳೆರಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿನಾನ್ ಕಳಂಜಿಬೈಲ್, ಕೋಶಾಧಿಕಾರಿಯಾಗಿ ಸುಹೈಲ್ ಕೊಡಗು, ಉಪಾಧ್ಯಕ್ಷರಾಗಿ ಜುಬೈರ್ ಸಕಲೇಶಪುರ , ಜೊತೆ ಕಾರ್ಯದರ್ಶಿಯಾಗಿ ಅಫ್ರೀದ್ ಪುಂಜಾಲಕಟ್ಟೆ ಹಾಗೂ ಉಳಿದ ವಿದ್ಯಾರ್ಥಿಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು

ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಜ್ಮಲ್ ಸ್ವಾಗತಿಸಿ , ಸಿನಾನ್ ವಂದಿಸಿದರು.

Leave a Comment

error: Content is protected !!