ಮೇ 19: ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜ ಇದರ ವತಿಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಯಕ್ಷಗಾನ ಶೈಲಿಯಲ್ಲಿ ಕಾವ್ಯವಾಚನ- ಪ್ರವಚನ ವೈಭವ, ಪ್ರಸಂಗ: ಶ್ರೀಜಿನ ಶಾಂತಿನಾಥ ಚರಿತೆ ಮೇ19ರಂದು ಅಪರಾಹ್ನ 3.00 ರಿಂದ ಬೆಳ್ತಂಗಡಿ “ಪಿನಾಕಿ ಹಾಲ್,” ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದಲ್ಲಿ ಜರುಗಲಿದೆ.

ಮುಮ್ಮೇಳದಲ್ಲಿ ನಮ್ಮ ಕಲಾವಿದರಾಗಿ ಹಾಡುಗಾರಿಕೆ ಪ್ರಸಿದ್ಧ ಯಕ್ಷಗಾನ ಭಾಗವತರು ಶ್ರೀಮತಿ ಕಾವ್ಯಶ್ರೀ ಆಜೇರು, ಪ್ರವಚನವನ್ನು ಕಾರ್ಕಳ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಮುನಿರಾಜ ರೆಂಜಾಳ, ಚೆಂಡೆ ಶ್ರೀ ಶ್ರೀಪತಿ ನಾಯಕ್ ಆಜೇರು. ಮದ್ದಳೆ ಶ್ರೀ ಚಂದ್ರಶೇಖರ ಗುರುವಾಯನಕೆರೆ ನಡೆಸಲಿದ್ದಾರೆ ಎಂದು ಶಾಂತಿಶ್ರೀ ಜೈನ ಮಹಿಳಾ ಸಮಾಜ ಅಧ್ಯಕ್ಷೆ ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್ ತಿಳಿಸಿದ್ದಾರೆ.

Leave a Comment

error: Content is protected !!