ಬೆಳ್ತಂಗಡಿಯ ಮಾಜಿ ಶಾಸಕ ದಿ| ವಸಂತ ಬಂಗೇರಿಗೆ ಶ್ರೀ ರಾಘವೇಂದ್ರ ಮಠದ ವತಿಯಿಂದ ನುಡಿನಮನ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಕೇದೆ ವಸಂತ ಬಂಗೇರರ ಅಕಾಲಿಕ ನಿಧನ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವೆಂದು ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ ತಿಳಿಸಿದರು.

ಕ್ಷೇತ್ರದ ಗೌರವ ಮಾರ್ಗದರ್ಶಿ ಪ್ರೊ| ಕೃಷ್ಣಪ್ಪ ಪೂಜಾರಿ, ಕ್ಷೇತ್ರದ ಪುರೋಹಿತರಾದ ರಾಘವೇಂದ್ರ ಬಾಂಗೀನಾಯ, ಸೋಮೇಗೌಡ ಮುಂತಾದವರು ಮೃತರ ಗುಣಗಾನವನ್ನು ಮಾಡಿದರು.

ಕೋಶಾಧಿಕಾರಿ ವಸಂತ ಸುವರ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಜಯರಾಮ ಬಂಗೇರ, ಶ್ರವಣ್ ರಾಜ್, ರಾಮನಾಥ್, ಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ ಕ್ಷೇತ್ರದ ಇತರ ಪ್ರತಿನಿಧಿಗಳು ಹಾಜರಿದ್ದರು.

Leave a Comment

error: Content is protected !!