ಕಳಿಯ ಗ್ರಾಮದ ಕೊಜಪ್ಪಾಡಿ ಮನೆಯ ಯಜ್ಞೇಶ್ ಪೂಜಾರಿಯವರ ಕಾಲಿನ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya

ಬೆಳ್ತಂಗಡಿ: ಕಳಿಯ ಗ್ರಾಮದ, ಕೊಜಪ್ಪಾಡಿ ಮನೆಯ, ಗೋಪಾಲ ಪೂಜಾರಿ ಹಾಗೂ ಹೇಮಾವತಿ ದಂಪತಿ ಪುತ್ರ ಯಜ್ಞೇಶ್ ರವರು ಧರ್ಮಸ್ಥಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸ್ವಸ್ಥರಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.

ಅಪಘಾತದಿಂದ ಇವರ ಎರಡು ಕಾಲುಗಳು ಮುರಿದಿದ್ದು, ಎರಡು ಕಾಲುಗಳ ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದು, ಇದಕ್ಕೆ ಸುಮಾರು 10 ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರ ತಾಯಿ ಒಂದು ವರ್ಷದ ಹಿಂದೆ ಹೃದಯದ ಚಿಕಿತ್ಸೆಗೆ ಒಳಗಾಗಿದ್ದು ಇದಕ್ಕಾಗಿ ಸುಮಾರು ಹಣವನ್ನು ಈಗಾಗಲೇ ಖರ್ಚು ಮಾಡಿದ್ದಾರೆ. ತಂದೆ ಪೈಂಟರ್ ಆಗಿದ್ದು ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸಲು ಅಶಕ್ತರಾಗಿದ್ದು, ದಾನಿಗಳ ಮೋರೆ ಹೋಗಿದ್ದಾರೆ. ಸಹೃದಯಿ ದಾನಿಗಳು ಯಜ್ಞೇಶ್ ರವರ ಶಸ್ತ್ರಚಿಕಿತ್ಸೆಗೆ ನೆರವಾಗಿ ಮೊದಲಿನಂತಾಗಲು ಸಹಕರಿಸೋಣ.

ಸಹಾಯ ಮಾಡುವವರು ಈ ನಂಬರನ್ನು ಸಂಪರ್ಕಿಸಿರಿ 8310879176 (ಗೋಪಾಲ ಪೂಜಾರಿ), Google Pay & Phone pay ನಂಬರ್ 8277257175 (ಯತೀಶ್).

A/c details
Bank of Baroda
A/C no. 83710100018858
IFSC code: BARBOVJBTHA

Leave a Comment

error: Content is protected !!